DAKSHINA KANNADA
ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ಆರೋಪಿಗಳ ಬಂಧನ
ಪುತ್ತೂರು : ಕಡಬ ತಾಲೂಕಿನ ಏನೆಕಲ್ಲಿನ ದೇವರ ಗುಂಡಿಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೆರೆಯಲ್ಲಿ ಮೀನಿನ ಬೇಟೆಯಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರನ್ನು ಬಶೀರ್, ಅಬ್ದುಲ್ ರಜಾಕ್, ಬಶೀರ್ ಮತ್ತು ಅಬ್ದುಲ್ ಸಮಾದ್ ಎಂದು ಗುರುತಿಸಲಾಗಿದ್ದು, ಬಂಧಿತರಲ್ಲಿ ಒರ್ವ ಆರೋಪಿ ಸವಣೂರು ಗ್ರಾಮಪಂಚಾಯತ್ ಸದಸ್ಯ. ಬಂಧಿತ ಆರೋಪಿಗಳು ಏನೇಕಲ್ಲಿನ ದೇವರ ಗುಂಡಿಯಲ್ಲಿ ಇರುವ ದೇವರ ಮೀನುಗಳೆಂದು ಕರೆಯುವ ಮೀನುಗಳನ್ನು ಹಿಡಿಯುತ್ತಿರುವ ಸಂದರ್ಭ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೀನು ಹಿಡಿಯುತ್ತಿದ್ದ ಆರೋಪಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
You must be logged in to post a comment Login