Connect with us

    UDUPI

    ಕಡಲ ಅಲೆ ಹೊಡೆತಕ್ಕೆ ಮುಳುಗಿದ ದೋಣಿ- ಮೀನುಗಾರರು ಪಾರು

    ಉಡುಪಿ : ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ಭಾಗದಲ್ಲಿ ಕೆಲ ದಿನಗಳ ಹಿಂದೆ ಮೀನುಗಾರಿಗೆ ತೆರಳಿದ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಘಟನೆಯ ವಿಡಿಯೋ ಬಾರೀ ವೈರಲ್ ಆಗಿದೆ.

    ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದು, ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ.. ಹೀಗೆ ದೋಣಿಯಲ್ಲಿ ಮೀನುಗಾರಿಕೆಗೆ ದಡದಿಂದ ಕಡಲಿಗೆ ಇಳಿದ ಕೆಲವೇ ಕ್ಷಣಗಳಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ಮಗುಚಿ ಬಿದ್ದು, ದೋಣಿಯಲ್ಲಿ ಆರು ಜನರಿದ್ದು ಅವರೆಲ್ಲಾ ಘಟನೆಯ ಮುನ್ಸೂಚನೆಯನ್ನು ಅರಿತುಕೊಂಡು ಸಮುದ್ರಕ್ಕೆ ಹಾರಿ ಈಜಿ ದಡ ಸೇರಿದ್ದಾರೆ. ಈ ದೃಶ್ಯವನ್ನು ದಡದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸದ್ಯ ವಿಡಿಯೋ ಬಾರೀ ವೈರಲ್ ಆಗಿದೆ..

    Share Information
    Advertisement
    Click to comment

    You must be logged in to post a comment Login

    Leave a Reply