ಬೆಳ್ತಂಗಡಿ ಡಿಸೆಂಬರ್ 8: ನಿನ್ನೆ ಸಂಜೆ ಮೀನು ಹಿಡಿಯಲು ತೆರಳಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ನಗರ ಪಂಚಾಯತ್ ಪಂಪ್ ಹೌಸ್ ಬಳಿ ನಡೆದಿದೆ.
ಉಜಿರೆ ಸಮೀಪದ ವ್ಯಕ್ತಿಗಳಿಬ್ಬರು ನಿನ್ನೆ ಸಂಜೆ ಮೀನು ಹಿಡಿಯಲು ನದಿಗೆ ಸಮೀಪ ಬಂದಿದ್ದು ಅವರು ತಂದಿರುವ ಬಲೆ ಹಾಗೂ ಬಟ್ಟೆಬರೆ ಮೊಬೈಲ್ ನದಿ ದಡದಲ್ಲಿ ಪತ್ತೆಯಾಗಿದೆ, ಆದ್ದರಿಂದ ಇಬ್ಬರೂ ಮುಳುಗಿರುವ ಸಂಶಯದಲ್ಲಿ ಸೋಮಾವತಿ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.
You must be logged in to post a comment Login