Connect with us

FILM

ಖಳನಟ ಸಂಪತ್ ಉಡುಪಿ ಮಠ ಭೇಟಿ

ಖಳನಟ ಸಂಪತ್ ಉಡುಪಿ ಮಠ ಭೇಟಿ

ಉಡುಪಿ ಅಕ್ಟೋಬರ್ 27: ಖ್ಯಾತ ಬಹುಭಾಷಾ ನಟ ಸಂಪತ್ ಅವರು ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರೀಕೃಷ್ಣನ ದರ್ಶನ ಮಾಡಿದ್ದೇನೆ ದೇವರಲ್ಲಿ ಎಲ್ಲರಿಗೂ ಒಳಿತು ಮಾಡು ಎಂದು ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು. ಕನ್ನಡದಲ್ಲಿ ಅಶ್ವಥ್ ಸ್ಯಾಮುವೆಲ್ ನಿರ್ದೇಶನದ ಅನುಪ್ತ ಚಿತ್ರದಲ್ಲಿ ನಟನೆ ಮಾಡುತ್ತಿದ್ದೆನೆ ಎಂದು ತಿಳಿಸಿದರು. ನನಗ ಉಡುಪಿಯ ವಾತಾವರಣ ತುಂಬಾ ಹಿಡಿಸಿದ್ದು ಇಲ್ಲೆ ಬಂದು ಸೆಟಲ್ ಆಗುವ ಮನಸ್ಸಿದೆ ಎಂದು ಹೇಳಿದರು.

ಮೆರ್ಸೆಲ್ ಚಿತ್ರ ವಿವಾದದ ಬಗ್ಗೆ ಹೇಳಿದ ಅವರು ಸಿನೆಮಾ ಒಂದು ಕ್ರಿಯೇಟಿವ್ ಫೀಲ್ಡ್ ಆಗಿದ್ದು ಸಿನೆಮಾವನ್ನು ಸಿನೆಮಾವಾಗಿ ಸ್ವೀಕರಿಸಬೇಕು , ಚಿತ್ರದ ಕಥೆಯನ್ನು ನಿಜ ಜೀವನಕ್ಕೆ ಅಳವಡಿಸಿಕೊಂಡರೆ ತೊಂದರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು. ಕಲಾವಿದನಿಗೆ ಜಾತಿ ಎನ್ನುವುದಿಲ್ಲ , ನಾನು ಉತ್ತರ ಪ್ರದೇಶದಲ್ಲಿ ಹುಟ್ಟಿ ದೆಹಲಿಯಲ್ಲಿ ಬೆಳೆದು ಬೆಂಗಳೂರಿನಲ್ಲಿ ಸೆಟಲ್ ಆಗಿದ್ದೆನೆ. ನಾನು ಹೆಚ್ಚಾಗಿ ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತೇನೆ ಇಲ್ಲಿಯವರೆಗೂ ಯಾರೂ ನನ್ನ ಜಾತಿ ಯಾವುದೆಂದು ಕೇಳಿಲ್ಲ ಎಂದರು. ಟೀಕೆಯನ್ನು ಹೇಗೆ ಸ್ವೀಕಾರ ಮಾಡ್ತೀರಿ ಅನ್ನೋದು ಮುಖ್ಯವಾಗುತ್ತದೆ ಎಂದು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *