Connect with us

KARNATAKA

ಹಾಸನ – ಅಪ್ಪ ಅಮ್ಮ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು….!!

ಹಾಸನ: ಆರ್ಥಿಕ ಸಂಕಷ್ಟಕ್ಕೆ ಹಾಸನದಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಮೃತರನ್ನು ಹಾಸನದ ಹೇಮಾವತಿ ನಗರದ ತಂದೆ ಸತ್ಯಪ್ರಸಾದ್, ತಾಯಿ ಅನ್ನಪೂರ್ಣ, ಹಾಗೂ ಮಗ ಗೌರವ್(21).


ಹಾಸನ ನಗರ ನಿವಾಸಿಯಾದ ಸತ್ಯ ಪ್ರಸಾದ್ ಬೇಲೂರು ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕತ್ವ ಹೊಂದಿದ್ದಾರೆ. ಗೌರವ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ. ಸತ್ಯಪ್ರಸಾದ್ ಅವರ ಪತ್ನಿ ಅನ್ನಪೂರ್ಣ ಗೃಹಿಣಿಯಾಗಿದ್ದರು.


ಆದರೆ ನಾನಾ ಕಾರಣದಿಂದ ಸತ್ಯ ಪ್ರಸಾದ್ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ವಾರದ ಹಿಂದಷ್ಟೆ ಇವರ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಪೆಟ್ರೋಲ್ ಬಂಕ್ ಕೂಡ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿರಲಿಲ್ಲ ಎಂದು ಹೇಳಲಾಗಿದೆ.

Advertisement
Click to comment

You must be logged in to post a comment Login

Leave a Reply