Connect with us

    LATEST NEWS

    ಪೇಜಾವರ ಶ್ರೀ ಭೇಟಿ ರದ್ದು ಮಾಡಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡ ಮಾಜಿ ಸಿಎಂ…?

    ಪೇಜಾವರ ಶ್ರೀ ಭೇಟಿ ರದ್ದು ಮಾಡಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡ ಮಾಜಿ ಸಿಎಂ…?

    ಮಂಗಳೂರು ಡಿಸೆಂಬರ್ 24: ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅನಾರೋಗ್ಯದಲ್ಲಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡುವುದಾಗಿ ಹೇಳಿಕೊಂಡಿದ್ದರು.

    ಕೊನೆಗೆ, ಸಂಜೆ ಹೊತ್ತಿಗೆ ತನಗೇ ಅನಾರೋಗ್ಯವೆಂದು ಉಡುಪಿಗೆ ತೆರಳುವುದನ್ನು ರದ್ದು ಮಾಡಿದ್ದರು. ಇದೀಗ, ಸಿದ್ದರಾಮಯ್ಯ ಆವತ್ತು ಪೇಜಾವರ ಶ್ರೀಗಳ ಭೇಟಿ ರದ್ದು ಮಾಡಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡ ವಿಚಾರ ಬಹಿರಂಗವಾಗಿದೆ.

    ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆಯಲ್ಲಿ ಕ್ರಿಸ್ಮಸ್ ಕೂಟದಲ್ಲಿ ಪಾಲ್ಗೊಂಡಿರುವ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದೆ. ಅನಾರೋಗ್ಯ ನೆಪ ಹೇಳಿ, ಪೇಜಾವರ ಭೇಟಿ ರದ್ದು ಮಾಡಿದ ನಿಜ ವಿಚಾರ ಬಹಿರಂಗ ಆಗಿದೆ ಅನ್ನುವ ರೀತಿ ಟೀಕೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply