KARNATAKA
ನೀವು ರಾಜೀನಾಮೆ ಕೊಟ್ಟರೆ….ಬಿಜೆಪಿಗೆ ಏನು ಕಾರ್ಯಕರ್ತರು ಸಿಗುವುದಿಲ್ಲವಾ? – ಈಶ್ವರಪ್ಪ
ಶಿವಮೊಗ್ಗ ಜುಲೈ 29: ಬಿಜೆಪಿ ಯುವಮೊರ್ಚಾ ನಾಯಕ ಪ್ರವೀಣ್ ಕೊಲೆ ಖಂಡಿಸಿ ಬಿಜೆಪಿ ಪದಾಧಿಕಾರಿಗಳು ನೀಡುತ್ತಿರುವ ರಾಜೀನಾಮೆಗೆ ಸಚಿವ ಈಶ್ವರಪ್ಪ ಗರಂ ಆಗಿದ್ದು, ನೀವು ರಾಜೀನಾಮೆ ಕೊಟ್ಟರೆ….ಬಿಜೆಪಿಗೆ ಏನು ಕಾರ್ಯಕರ್ತರು ಸಿಗುವುದಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಿಜೆಪಿ ಪದಾಧಿಕಾರಿಗಳು ನೀಡುತ್ತಿರುವುದು ಹೇಡಿಗಳ ಲಕ್ಷಣ ಎಂದು ಹೇಳಿದ ಅವರು ಈ ಕೂಡಲೇ ರಾಜೀನಾಮೆ ಹಿಂಪಡೆಯಿರಿ ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಅನೇಕ ಹಿರಿಯರು ಪ್ರಾಣ ತ್ಯಾಗ, ಬಲಿದಾನಗಳ ಮೂಲಕ ಕಟ್ಟಿದ್ದಾರೆ. ನಾವೆಲ್ಲಾ ಒಂದು ಸ್ಥಾನಮಾನದಲ್ಲಿ ಇದ್ದೇವೆ. ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಈಗಲೇ ರಾಜೀನಾಮೆ ಕೊಡುತ್ತೇವೆ ಎಂದರೆ ಹೇಗೆ? ನೀವು ಪಕ್ಷಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ರಾಜೀನಾಮೆ ಕೊಡುವುದರಿಂದ ಹಿಂದುತ್ವ ಸಿದ್ಧಾಂತಕ್ಕೆ, ನಮ್ಮ ನಾಯಕರಿಗೆ ಅಪಮಾನ ಮಾಡಿದಂತೆ. ರಾಜೀನಾಮೆಯೇ ಉತ್ತರ ಅಲ್ಲ. ರಾಜೀನಾಮೆ ಕೊಟ್ಟಿರುವವರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಆ ಜಾಗಕ್ಕೆ ಬೇರೆಯವರು ಬರುತ್ತಾರೆ. ಬಿಜೆಪಿಗೆ ಏನು ಕಾರ್ಯಕರ್ತರು ಸಿಗುವುದಿಲ್ಲವಾ? ರಾಜೀನಾಮೆ ಸಿಟ್ಟಿನಿಂದ ಕೊಟ್ಟಿದ್ದಾರೆ. ಜೊತೆಗೆ ನಮ್ಮ ಯುವಕರಿಗೆ ಸ್ವಲ್ಪ ಪ್ರಬುದ್ಧತೆ ಕಡಿಮೆ. ಅವರಿಗೆ ಸಮಾಧಾನ ಮಾಡುತ್ತೇವೆ ಎಂದಿದ್ದಾರೆ
You must be logged in to post a comment Login