Connect with us

    LATEST NEWS

    ಭೀಕರ ಅಪಘಾತದಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲಕ ಸುನಿಲ್ ಚಾತ್ರ ಮೃತ್ಯು

    ಭೀಕರ ಅಪಘಾತದಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲಕ ಸುನಿಲ್ ಚಾತ್ರ ಮೃತ್ಯು

    ಕುಂದಾಪುರ ಸೆಪ್ಟೆಂಬರ್ 15: ನಿನ್ನೆ ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬಾ ಮೋಟಾರ್ಸ್ ಆಡಳಿತ ಪಾಲುದಾರ ಸುನೀಲ್ ಚಾತ್ರ(41) ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಪುತ್ರಿ, ತಂದೆ, ತಾಯಿ ಹಾಗೂ ಸಹೋದರ, ಸಹೋದರಿ ಇದ್ದಾರೆ.

    ತಮಿಳುನಾಡಿನ ಕರೂರ್‌ನಲ್ಲಿ ತಮ್ಮ ಸಂಸ್ಥೆಯ ಹೊಸ ಬಸ್ ಒಂದರ ಬಾಡಿ ಬಿಲ್ಡಿಂಗ್ ಕೆಲಸವನ್ನು ನೋಡಲು ಹೋಗಿ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮತಿ ವೆಲೂರ್ ಬೈಪಾಸ್ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು ಸ್ಥಳದಲ್ಲೆ ಸುನಿಲ್ ಚಾತ್ರ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಅವರು ಪ್ರಯಾಣಿಸುತ್ತಿದ್ದ ಪಜೆರೊ ಸ್ಪೋರ್ಟ್ಸ್ ವರ್ಷನ್ ಎಸ್‌ಯುವಿ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಸುನೀಲ್ ಚಾತ್ರ ಅವರು ಛತ್ತೀಸ್​ಗಢ, ಪಂಜಾಬ್, ಹರ್ಯಾಣದಲ್ಲೂ ಸಾರಿಗೆ ಉದ್ಯಮ ಆರಂಭಿಸಿದ್ದರು. ಛತ್ತೀಸ್​ಗಢದ ಗ್ರಾಮೀಣ ಪ್ರದೇಶಗಳಿಗೆ ಅವರು ಆರಂಭಿಸಿದ ಸಾರಿಗೆ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಎರಡು ತಿಂಗಳ ಹಿಂದೆ ಗಜಾನನ ಮೋಟಾರ್ಸ್ ಕಂಪನಿ ಖರೀದಿಸಿದ್ದು, ಕಳೆದ ವಾರವಷ್ಟೇ ತನ್ನ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply