Connect with us

    KARNATAKA

    ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ 30 ಕುರಿಗಳ ಮಾರಣಹೋಮ..!

    ಗದಗ :  ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ 30 ಕುರಿಗಳ ಮಾರಣಹೋಮ ಗಜೇಂದ್ರಗಡ-ರೋಣ ರಸ್ತೆ ಮಾರ್ಗದ ದಿಂಡೂರ ಗ್ರಾಮದ ಕ್ರಾಸ್ ನಲ್ಲಿ  ಗುರುವಾರ ರಾತ್ರಿ ನಡೆದಿದೆ .

    ಸರ್ಕಾರಿ ಬಸ್ ಹರಿದು 30 ಕುರಿಗಳು ಹೆದ್ದಾರಿಯಲ್ಲೇ  ಜೀವಕಳಕೊಂಡಿವೆ. ಬಾದಾಮಿ ಘಟಕದ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು ಓವರ್ ಟೆಕ್ ಮಾಡಲು ಹೋಗಿ ಮೂವತ್ತು ಕುರಿಗಳ ಮೇಲೆ ಚಾಲಕ ಬಸ್ ಹರಿಸಿದ್ದಾನೆ.  ಸುಮಾರು 4.5 ಲಕ್ಷ‌ ಮೌಲ್ಯದ ಕುರಿಗಳು ಚಾಲಕನ ನಿರ್ಲಕ್ಷ್ಯದ ಚಾಲನೆಗೆ ಜೀವಕಳಕೊಂಡಿದ್ದು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ಗೋಳಾಟ ಹೇಳತ್ತೀರದ್ದಾಗಿದೆ. ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಪ್ಪಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply