Connect with us

LATEST NEWS

ಜಾಗದ ತಕರಾರಿಗೆ ಹಾಡು ಹಗಲೇ ದಂಪತಿಗಳ ಬರ್ಬರ ಹತ್ಯೆ

ಜಾಗದ ತಕರಾರಿಗೆ ಹಾಡು ಹಗಲೇ ದಂಪತಿಗಳ ಬರ್ಬರ ಹತ್ಯೆ

ಮಂಗಳೂರು ಎಪ್ರಿಲ್ 29: ಜಾಗದ ತಕರಾರಿಗೆ ಹಾಡುಹಗಲೇ ದಂಪತಿಗಳ ಬರ್ಬರ ಹತ್ಯೆಗೈದಿರುವ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಏಳಿಂಜೆ ಎಂಬಲ್ಲಿ ನಡೆದಿದೆ.

ಮೃತರನ್ನು ವಿನ್ಸೆಂಟ್ ಡಿಸೋಜ ( 48) ಹೆಲಿನ್ ಡಿಸೋಜ ( 46) ಎಂದು ಗುರುತಿಸಲಾಗಿದ್ದು, ಹತ್ಯೆ ಆರೋಪಿಯನ್ನು ಪಕ್ಕದ ಮನೆಯ ಅಲ್ಪನ್ಸ್ ಸಲ್ಡಾನ ಎಂದು ಗುರುತಿಸಲಾಗಿದೆ. ಆರೋಪಿ ಮನೆಯ ಪಕ್ಕದ ಜಾಗದ ತಕಾರಿನ ಹಿನ್ನಲೆ ದಂಪತಿಗಳನ್ನು ಪಿಕ್ಕಾಸು ಹಾಗೂ ಹಾರೆಯಿಂದ ಹಲ್ಲೆ ನಡೆಸಿ ಮನೆ ಮುಂದೆಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ನೆರೆಮನೆಯ ಅಲ್ಫಾನ್ಸೋ (50) ಎಂಬಾತ ಕೊಲೆ ಮಾಡಿರುವ ಆರೋಪಿ. ಮೂವರೂ ಕಿನ್ನಿಗೋಳಿಯ ಏಳಿಂಜೆ ನಿವಾಸಿಗಳು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಕೊಲೆಯಾದ ಕುಟುಂಬಕ್ಕೂ ಆರೋಪಿಯ ಕುಟುಂಬಕ್ಕೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೈಷಮ್ಯ ಇತ್ತು. ಬುಧವಾರ ಬೆಳಿಗ್ಗೆ ದಂಪತಿಯ ಮೇಲೆ ದಾಳಿ ನಡೆಸಿದ ಆರೋಪಿ, ಹಾರೆ ಮತ್ತು ಪಿಕ್ಕಾಸುಗಳಿಂದ ಮನಬಂದಂತೆ ಕೊಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಡಿಸಿಪಿ ಅರುಣಾಂಗ್ಷು ಗಿರಿ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು.ಬೆಳ್ಳಿಯಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *