DAKSHINA KANNADA
ನಕ್ಸಲ್ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ -ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸುಳ್ಯ ಮಾರ್ಚ್ 26: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿದ್ದಾರೆ. ಬೆಳಿಗ್ಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು ಯಾವುದೇ ಶುಭ ಕೆಲಸ, ಹೋರಾಟ ಮಾಡುವ ಮೊದಲು ಭಗವಂತನ ದರ್ಶನ ಮಾಡುತ್ತೇನೆ. ವಿಧಾನಸಭಾ ಚುನಾವಣೆ ಸಂರ್ಭದಲ್ಲೂ ಮಾಡಿದ್ದೇನೆ ಆಗ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಗೆಲ್ಲುವ ಮೂಲಕ ಗೆಲುವು ಸಾಧಿಸಿದ್ದೇನೆ ಎಂದರು. ಈಗಾಗಲೇ ಧರ್ಮಸ್ಥಳ ಭೇಟಿ ಮುಗಿಸಿದ್ದು, ಶೃಂಗೇರಿ, ಕೊಲ್ಲೂರು, ಗೌರಿಗದ್ದೆ ಭೇಟಿ ಮಾಡಿ ಪ್ರಾರ್ಥನೆ ನಡೆಸುವೆ ಎಂದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಕ್ಸಲ್ ಚಟುವಟಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತೇನೆ ಎಂದರು. ಇನ್ನು ಚುನಾವಣಾ ಸಂದರ್ಭದಲ್ಲಿ ಕೃಷಿಕರ ಕೋವಿ ಠೇವಣಿ ಇಡುವ ವಿಚಾರ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು ಇದು ಹಿಂದಿನಿಂದಲೇ ಬಂದ ಸಂಪ್ರದಾಯ, ಚುನಾವಣಾ ಇಲಾಖೆಯ ಆದೇಶದ ಮೇರೆಗೆ ಈ ಕ್ರಮ ಜರುಗಿಸಲಾಗುತ್ತಿದೆ. ಕಾಡುಪ್ರಾಣಿಗಳ ಸಮಸ್ಯೆಯಿರುವ ಕೃಷಿಕರಿಗೆ ಕೋವಿ ಠೇವಣಿ ಇಡುವ ಪ್ರಕ್ರಿಯಿಯಿಂದ ವಿನಾಯತಿ ನೀಡಲು ಪ್ರಯತ್ನಿಸಲಾಗುವುದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
You must be logged in to post a comment Login