Connect with us

LATEST NEWS

ಕರಾವಳಿಯಲ್ಲಿ ಕಾಂಗ್ರೇಸ್ 10 ಸ್ಥಾನಗಳನ್ನು ಗೆಲ್ಲಲಿದೆ – ಡಿಕೆ ಶಿವಕುಮಾರ್

ಕುಂದಾಪುರ ಎಪ್ರಿಲ್ 24: ಕರಾವಳಿಯಲ್ಲಿ ಈ ಬಾರಿ ಕಾಂಗ್ರೇಸ್ 10 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ತಿಳಿಸಿದ್ದಾರೆ.  ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಬದುಕಿನ ಬಗ್ಗೆ ಮಾತನಾಡಿದರೆ ಬಿಜೆಪಿ ಭಾವನೆ ಬಗ್ಗೆ ಮಾತನಾಡುತ್ತದೆ. ಬಿಜೆಪಿಗೆ ಹಿಂದುತ್ವ ಫಲ ಕೊಡಲ್ಲ ಎಂದರು.


ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ರಾಜಕಾರಣಿಗಳು. ಬಿಳಿ ಬಟ್ಟೆ ಹಾಕೊಂಡಿದ್ದೇವೆ ಹೊರತು ಖಾವಿ ಹಾಕೊಂಡಿಲ್ಲ. ಯಾವುದೇ ಒಳ್ಳೆಯ ಕೆಲಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ. ದೇವರ ಅನುಗ್ರಹ ಇಲ್ಲದೇ ಏನೂ ಆಗುವುದಿಲ್ಲ ಎಂದರು.


ನಿನ್ನೆ ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದೆ. ಹಿಂದೆಯೂ ಬಂದಿದ್ದೆ, ಆದರೆ ಇಷ್ಟು ಉತ್ಸಾಹ ಇರಲಿಲ್ಲ. ಕೇಸರಿ ಶಾಲು ಹಾಕಿ ಬಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರ ಆಸೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಬೇಕು ಎಂಬುದು. ಮುಂದೆ ರಾಹುಲ್ ಗಾಂಧಿ ಬರುತ್ತಾರೆ. ಉಡುಪಿಯಲ್ಲಿನ ಬಂಡಾಯ ಸರಿ ಆಗುತ್ತಿದೆ ಎಂದು ಅವರು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *