LATEST NEWS
ಉತ್ತರಾಖಂಡ – ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಡೆಹ್ರಾಡೂನ್ ಎಪ್ರಿಲ್ 24: ಹೆಲಿಕಾಪ್ಟರ್ ಹತ್ತುವ ವೇಳೆ ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಹೆಲಿಪ್ಯಾಡ್ನಲ್ಲಿ ಸಂಭವಿಸಿದೆ.
2017 ರ ಬ್ಯಾಚ್ ರಾಜ್ಯ ಹಣಕಾಸು ಸೇವಾ ಅಧಿಕಾರಿ ಅಮಿತ್ ಸೈನಿ ಮೃತ ಅಧಿಕಾರಿ. ಅವರು ಏಪ್ರಿಲ್ 25 ರಂದು ಪ್ರಾರಂಭವಾಗುವ ಕೇದಾರನಾಥ ಯಾತ್ರೆಗೆ ಮುಂಚಿತವಾಗಿ ಆಡಿಟ್ ಮತ್ತು ತಪಾಸಣೆ ಸಂಬಂಧಿತ ಕೆಲಸಕ್ಕಾಗಿ ಭಾನುವಾರ ಬೆಳಿಗ್ಗೆ ಡೆಹ್ರಾಡೂನ್ನಿಂದ ಕೇದಾರನಾಥಕ್ಕೆ ಇತರ ಅಧಿಕಾರಿಗಳೊಂದಿಗೆ ತೆರಳಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಕೆಲಸ ಮುಗಿದ ನಂತರ ಅಧಿಕಾರಿ ಡೆಹ್ರಾಡೂನ್ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ . ಕೆಸ್ಟ್ರೆಲ್ ಏವಿಯೇಷನ್ ಕಂಪನಿಯು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ಗೆ ಹತ್ತಲು ಪ್ರಯತ್ನಿಸುತ್ತಿದ್ದಾಗ ರೆಕ್ಕೆ ಅವರಿಗೆ ಬಡಿದಿದೆ. ಹೆಲಿಕಾಪ್ಟರ್ ಹತ್ತುವ ಜಾಗಕ್ಕೆ ತಲುಪಲು ಅವರು ಹಿಂದಿನಿಂದ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ರೆಕ್ಕೆ ಅವರ ಕುತ್ತಿಗೆಗೆ ಬಡಿದಿದೆ. ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಸೈನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
You must be logged in to post a comment Login