LATEST NEWS
ಉತ್ತರಾಖಂಡ – ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು
ಡೆಹ್ರಾಡೂನ್ ಎಪ್ರಿಲ್ 24: ಹೆಲಿಕಾಪ್ಟರ್ ಹತ್ತುವ ವೇಳೆ ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಹೆಲಿಪ್ಯಾಡ್ನಲ್ಲಿ ಸಂಭವಿಸಿದೆ.
2017 ರ ಬ್ಯಾಚ್ ರಾಜ್ಯ ಹಣಕಾಸು ಸೇವಾ ಅಧಿಕಾರಿ ಅಮಿತ್ ಸೈನಿ ಮೃತ ಅಧಿಕಾರಿ. ಅವರು ಏಪ್ರಿಲ್ 25 ರಂದು ಪ್ರಾರಂಭವಾಗುವ ಕೇದಾರನಾಥ ಯಾತ್ರೆಗೆ ಮುಂಚಿತವಾಗಿ ಆಡಿಟ್ ಮತ್ತು ತಪಾಸಣೆ ಸಂಬಂಧಿತ ಕೆಲಸಕ್ಕಾಗಿ ಭಾನುವಾರ ಬೆಳಿಗ್ಗೆ ಡೆಹ್ರಾಡೂನ್ನಿಂದ ಕೇದಾರನಾಥಕ್ಕೆ ಇತರ ಅಧಿಕಾರಿಗಳೊಂದಿಗೆ ತೆರಳಿದ್ದರು.
ಕೆಲಸ ಮುಗಿದ ನಂತರ ಅಧಿಕಾರಿ ಡೆಹ್ರಾಡೂನ್ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ . ಕೆಸ್ಟ್ರೆಲ್ ಏವಿಯೇಷನ್ ಕಂಪನಿಯು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ಗೆ ಹತ್ತಲು ಪ್ರಯತ್ನಿಸುತ್ತಿದ್ದಾಗ ರೆಕ್ಕೆ ಅವರಿಗೆ ಬಡಿದಿದೆ. ಹೆಲಿಕಾಪ್ಟರ್ ಹತ್ತುವ ಜಾಗಕ್ಕೆ ತಲುಪಲು ಅವರು ಹಿಂದಿನಿಂದ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ರೆಕ್ಕೆ ಅವರ ಕುತ್ತಿಗೆಗೆ ಬಡಿದಿದೆ. ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಸೈನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
You must be logged in to post a comment Login