Connect with us

DAKSHINA KANNADA

ಒಳ್ಳೆ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲಿದೆ – ದಿನೇಶ್ ಗುಂಡೂರಾವ್

Share Information

ಪುತ್ತೂರು ಅಗಸ್ಟ್ 11: ಒಳ್ಳೆಯ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲಿದ್ದು, ಕಳಪೆ ಕೆಲಸ ಮಾಡಿವರ ಬಿಲ್ ತಡೆ ಹಿಡಿಯಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ಪುತ್ತೂರಿನಲ್ಲಿ ಮಾತನಾಡಿದ ಅವರು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಉಪ ಮುಖ್ಯಮಂತ್ರಿ ಗುತ್ತಿಗೆದಾರರ ಬಿಲ್ ವಿಚಾರದಲ್ಲಿ ಕಠಿಣ ನಿಲುವು ತಾಳಿದ್ದು, ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಪ್ರಾಮಾಣಿಕ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು, ಅಧಿಕಾರಿಗಳಿಂದ ವರದಿ ಶೀಘ್ರವೇ ಸರಕಾರಕ್ಕೆ ತಲುಪಲಿದೆ. ಒಳ್ಳೆ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲಿದೆ. ಕಳಪೆ ಕೆಲಸ ಮಾಡಿದವರ ಬಿಲ್ ತಡೆಹಿಡಿಯಲಾಗುವುದು ಎಂದರು, ಸರಕಾರ ಯಾವುದೇ ಗುತ್ತಿಗೆದಾರನಿಗೆ ತೊಂದರೆ ಕೊಡುವುದಿಲ್ಲ. ಬಿಬಿಎಂಪಿ ಯಲ್ಲಿ ಕಳೆದ ಎರಡು ವರ್ಷಗಳಿಂದ ಬಿಲ್ ಪಾವರಿಯಾಗಿಲ್ಲ, ಗುತ್ತಿಗೆದಾರರ ಪರ ನಮಗೆ ಕಾಳಜಿಯಿದೆ. ಯಾರಿಗೂ ಅನ್ಯಾಯವಾಗಲು ಬಿಡೋದಿಲ್ಲ ಎಂದರು. ಇನ್ನು ಕರಾವಳಿಯಲ್ಲಿ ಮೆಸ್ಕಾಂ ನಿಂದ ಲೋಡ್ ಶೆಡ್ಡಿಂಗ್ ಆರಂಭ  ಬಗ್ಗೆ ಮಾಹಿತಿ ಇಲ್ಲ ಎಂದ ಸಚಿವ, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದರು.


Share Information
Advertisement
Click to comment

You must be logged in to post a comment Login

Leave a Reply