Connect with us

    LATEST NEWS

    ಅರಶಿನ ಗುಂಡಿ ಜಲಪಾತ – ವಾರದ ಬಳಿಕ ಪತ್ತೆಯಾದ ಶರತ್ ಕುಮಾರ್ ಮೃತದೇಹ

    ಕುಂದಾಪುರ. ಜುಲೈ 30:ಜಲಪಾತದ ಎದುರು ವಿಡಿಯೋ ಮಾಡಲು ಹೋಗಿ ಕಾಲುಜಾರಿಬಿದ್ದು ನದಿನೀರಿನ ಪಾಲಾಗಿದ್ದ ಶರತ್ ಕುಮಾರ್ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.


    ಕಳೆದ ವಾರ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಮೊಬೈಲ್ ವಿಡಿಯೋ ಮಾಡಲು ಹೋದಿ ಶರತ್ ಕುಮಾರ್ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
    ಯುವಕನ ಮೃತದೇಹಕ್ಕಾಗಿ ಕಳೆದ ವಾರದಿಂದ ಶೋಥ ಕಾರ್ಯನಡೆಸಲಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು ಪೊಟರೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply