Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಗೆ ಒಂದೊಳ್ಳೆ ಸುದ್ದಿ ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ

ದಕ್ಷಿಣಕನ್ನಡ ಜಿಲ್ಲೆಗೆ ಒಂದೊಳ್ಳೆ ಸುದ್ದಿ ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ

ಮಂಗಳೂರು ಎಪ್ರಿಲ್ 5: ಕೊರೊನಾದಿಂದ ಬಸವಳಿದಿದ್ದ ಕರಾವಳಿಗರಿಗೆ ಒಂದು ಒಳ್ಳೆಯ ಸುದ್ದಿ ಬಂದಿದ್ದು, ಮಂಗಳೂರಿನಲ್ಲಿ ಓರ್ವ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ.

ಭಟ್ಕಳ ಮೂಲದ 22 ವರ್ಷದ ಯುವಕ ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದಾನೆ. ಈತ ಮಾರ್ಚ್ 19 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ.‌ ಎಪ್ರಿಲ್ 2 ಮತ್ತು ಎಪ್ರಿಲ್ 3 ರಂದು ಈತನ ಗಂಟಲು ದ್ರವವನ್ನು ಪುನರ್ ಪರೀಕ್ಷೆಗೆ ಕಳುಹಿಸಲಾಗಿತ್ತು.
ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ನಾಳೆ ಡಿಸ್ಚಾರ್ಜ್ ಗೊಳ್ಳಲಿದ್ದಾರೆ. ನಿನ್ನೆ ಕಳುಹಿಸಲಾಗಿದ್ದ 28 ಗಂಟಲು ದ್ರವದ ಪರೀಕ್ಷೆಯ ವರದಿ ಕೂಡ ನೆಗೆಟಿವ್ ಬಂದಿದೆ. ಈವರೆಗೆ 12 ಜನ ಕೊರೊನಾ ದೃಢಪಟ್ಟಿದ್ದು ಇದರಲ್ಲಿ ಓರ್ವ ಗುಣಮುಖನಾಗಿದ್ದು ಇನ್ನೂ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *