LATEST NEWS
ವಿದ್ಯುತ್ ಶಾಕ್ ಗೆ ಯುವಕನೋರ್ವ ಬಲಿ
ವಿದ್ಯುತ್ ಶಾಕ್ ಗೆ ಯುವಕನೋರ್ವ ಬಲಿ
ಸುಳ್ಯ ಅಕ್ಟೋಬರ್ 8: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯದ ಗಾಂಧಿನಗರ ಗುರುಂಪು ಎಂಬಲ್ಲಿ ನಡೆದಿದೆ.
ದುಗಲಡ್ಕದ ನಾಗರಾಜ್ ಕಂದಡ್ಕ (೧೮) ಮೃತ ಯುವಕ ಎಂದು ಗುರುತಿಸಲಾಗಿದ್ದು, ಈತ ಇಂಡಸ್ಟ್ರೀಯಲ್ನಲ್ಲಿ ಉದ್ಯೋಗಿಯಾಗಿದ್ದರು. ವಿದ್ಯುತ್ ಗೆ ಸಂಬಂಧಪಟ್ಟ ಕೆಲಸ ಮಾಡುವ ಸಂದರ್ಭ ವಿದ್ಯುತ್ ಕನೆಕ್ಷನ್ ಮಾಡುವ ವೇಳೆ ಶಾಕ್ ಹೊಡೆದಿದ್ದು, ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ೮ ತಿಂಗಳ ಹಿಂದೆಯಷ್ಟೆ ಇಂಡಸ್ಟ್ರೀಗೆ ಕೆಲಸಕ್ಕೆ ಸೇರಿಕೊಂಡಿದ್ದ.
You must be logged in to post a comment Login