LATEST NEWS
ಮಂಗಳೂರಿನ ಸ್ಮಶಾನಗಳಲ್ಲಿ ಕೊರೊನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಆಕ್ಷೇಪ
ಮಂಗಳೂರಿನ ಸ್ಮಶಾನಗಳಲ್ಲಿ ಕೊರೊನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಆಕ್ಷೇಪ
ಮಂಗಳೂರು, ಏಪ್ರಿಲ್ 23 : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ಮಹಿಳೆಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಮಂಗಳೂರಿನ ಸ್ಮಶಾನಗಳ ಸಮೀಪದಲ್ಲಿರುವ ಸ್ಥಳೀಯ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಇದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.
ಈ ಮೊದಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು ಆದರೆ ಅಲ್ಲಿ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿ ಜನರ ಬೆಂಬಲಕ್ಕೆ ನಿಂತಿದ್ದಾರೆ.
ಈ ಹಿನ್ನಲೆ ಮಂಗಳೂರಿನ ನಂದಿಗುಡ್ಡೆ, ಅಥವಾ ಬೋಳೂರು ಸ್ಮಶಾನಗಳಲ್ಲಿ ಸಂಸ್ಕಾರಕ್ಕೆ ಜಿಲ್ಲಾಡಳಿತ ಮುಂದಾಗಿತ್ತು, ಆದರೆ ಅಲ್ಲೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಈ ನಡುವೆ ಶಾಸಕ ವೇದವ್ಯಾಸ್ ಕಾಮತ್ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದ್ದರೂ ಕೂಡ ಜನ ಒಪ್ಪದ ಕಾರಣ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಶವಸಂಸ್ಕಾರ ಪರ್ಯಾಯ ವ್ಯವಸ್ಥೆ ಇಲ್ಲದೇ ಗೊಂದಲಕ್ಕೀಡಾಗಿದೆ. ಸದ್ಯ ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವ ವೆನ್ಲಾಕ್ ಆಸ್ಪತ್ರೆಯಲ್ಲೇ ಇದೆ.
You must be logged in to post a comment Login