KARNATAKA
ಮದುವೆ ದಿನವೇ ಕೊರೊನಾಗೆ ಬಲಿಯಾದ ವರ…!!
ಚಿಕ್ಕಮಗಳೂರು ಎಪ್ರಿಲ್ 29: ತನ್ನ ದಾಂಪತ್ಯದ ಹೊಸ ಜೀವನ ಪ್ರಾರಂಭಿಸಬೇಕಿದ್ದ ಯುವಕ ಮದುವೆ ದಿನವೇ ಮಾಹಾಮಾರಿ ಕೊರೊನಾಗೆ ಬಲಿಯಾಗಿರುವ ಘಟನೆ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪೃಥ್ವಿರಾಜ್ (32) ಎಂದು ಗುರುತಿಸಲಾಗಿದೆ. ಇಂದು ಇವರ ಮದುವೆ ದಿನವಾಗಿದ್ದು, ಮಂಗಳವಾದ್ಯ ಕೇಳಬೇಕಾಗಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.
ಪೃಥ್ವಿರಾಜ್, ಹತ್ತು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ್ದ. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪೃಥ್ವಿರಾಜ್ ಮೃತಪಟ್ಟಿದ್ದಾರೆ.
You must be logged in to post a comment Login