Connect with us

    LATEST NEWS

    ಎಮ್ಮೆ ಹಾಲು ಕೊಡದ್ದಕ್ಕೆ ಕೋಣಕ್ಕೆ ಬರೆ ಎಳೆದರು – ಸಂಸದ ಆಸ್ಕರ್ ಫೆರ್ನಾಂಡಿಸ್

    ಎಮ್ಮೆ ಹಾಲು ಕೊಡದ್ದಕ್ಕೆ ಕೋಣಕ್ಕೆ ಬರೆ ಎಳೆದರು – ಸಂಸದ ಆಸ್ಕರ್ ಫೆರ್ನಾಂಡಿಸ್

    ಉಡುಪಿ ನವೆಂಬರ್ 8: ಕೇಂದ್ರ ಸರಕಾರದ ನೋಟ್ ಬ್ಯಾನ್ ಗೆ ಒಂದು ವರ್ಷ ಪೂರೈಸಿದ ಹಿನ್ನಲೆ ಉಡುಪಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಕರಾಳ ದಿನಾಚರಣೆ ಪ್ರತಿಭಟನೆ ನಡೆಸಿದರು.

    ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. 15 ಲಕ್ಷ ರೂಪಾಯಿ ಜನರಿಗೆ ಹಂಚುವುದಾಗಿ ಮೋದಿ ಹೇಳಿದ್ದರು ಆದರೆ ವಿದೇಶದಿಂದ 1ಲಕ್ಷವನ್ನೂ ಮೋದಿಗೆ ತರಲಾಗಲಿಲ್ಲ ಎಂದು ಟೀಕಿಸಿದರು.

    ಎಮ್ಮೆ ಹಾಲು ಕೊಡದ್ದಕ್ಕೆ ಕೋಣಕ್ಕೆ ಬರೆ ಎಳೆದರು ಎಂದ ಅವರು ವಿದೇಶದಿಂದ ಕಾಳಧನ ತರಲು ವಿಫಲವಾದ ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಲು ನೋಟ್ ಬ್ಯಾನ್ ಮಾಡಿದರು. ನೋಟ್ ಬ್ಯಾನ್ ನಿಂದಾಗಿ ಜಿಡಿಪಿ ಸಂಪೂರ್ಣ ಕುಸಿದು ಹೋಗಿದೆ. ಯುನೆಸ್ಕೋ ವರದಿ ನೋಡಿದ್ರೆ ಕಣ್ಣೀರು ಬರುತ್ತದೆ. ಭಾರತದಲ್ಲಿ ಬಡತನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಉಡುಪಿಯಲ್ಲಿ ಸಂಸದ ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸರಕಾರ ನೋಟ್ ಬ್ಯಾನ್ ಕ್ರಮವನ್ನು ಟೀಕಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply