Connect with us

LATEST NEWS

ಸಂಸದ ನಳಿನ್ ವಿರುದ್ದ ಕಾಂಗ್ರೇಸ್ ನಿಂದ ಅಪಪ್ರಚಾರ

ಸಂಸದ ನಳಿನ್ ವಿರುದ್ದ ಕಾಂಗ್ರೇಸ್ ನಿಂದ ಅಪಪ್ರಚಾರ

ಮಂಗಳೂರು ಅಗಸ್ಟ್ 7: ನಂಬರ್ 1 ಸಂಸದ ಎಂದು ಖ್ಯಾತಿಯನ್ನು ಪಡೆದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ಎತ್ತಿಕಟ್ಟುವ ಕೆಲಸವನ್ನು ಜಿಲ್ಲಾ ಕಾಂಗ್ರೇಸ್ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಸಂಸದರು ಜಿಲ್ಲೆಗೆ ಹಾಗೂ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಮಾಡಿದ್ದು, ಭ್ರಷ್ಟಾಚಾರ ರಹಿತ ಸಂಸದನೆಂದು ಹೆಗ್ಗಳಿಕೆಯನ್ನ ಹೊಂದಿದ್ದಾರೆ ಆದರೆ ಅವರ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್ ನಳಿನ್ ಕುಮಾರ್ ಕಟೀಲ್ ವಿರುದ್ದ ಅಪಪ್ರಚಾರವನ್ನು ಮಾಡುತ್ತಿದೆ ಎಂದರು.

ಪಂಪವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಸುವಂತೆ ಹೆದ್ದಾರಿ ಅಭಿವೃದ್ದಿ ಗುತ್ತಿಗೆದಾರರಿಗೆ ಸಂಸದ ನಳಿನ್ ಕುಮಾರ್ ಅಂತಿಮ ಗಡುವು ನೀಡಿದ್ದಾರೆ. ಕಾಮಗಾರಿ ಟೆಂಡರ್ ವಿಳಂಬಕ್ಕೆ ನಗರಪಾಲಿಕೆ ಆಡಳಿತವೂ ಕಾರಣ ಎಂದು ಅವರು ಹೇಳಿದರು.

ಸಂಸದ ನೇತೃತ್ವದಲ್ಲಿ ಜಿಲ್ಲೆಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಸೋಲಿನಿಂದ ಕಂಗೆಟ್ಟಿರುವವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ, ಈ ಕುರಿತಂತೆ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *