Connect with us

DAKSHINA KANNADA

ಭಾರೀ ಮಳೆಗೆ ತಡೆಗೋಡೆ ಕುಸಿತ

ಭಾರೀ ಮಳೆಗೆ ತಡೆಗೋಡೆ ಕುಸಿತ

ಮಂಗಳೂರು, ಅಕ್ಟೋಬರ್ 3: ಕರಾವಳಿ ಜಿಲ್ಲೆಗಳಾದ್ಯಂತ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಭಾರೀ ಅನಾಹುತಗಳು ಸಂಭವಿಸಿದೆ.ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಅವರಣ ಗೋಡೆ ಕುಸಿದು ಒಂದು ವಾಹನ ಹಾಗೂ ಒರ್ವರಿಗೆ ಗಾಯವಾದ ಘಟನೆ ಇಂದು ಮುಂಜಾನೆ ನಡೆದಿದೆ. ಲೇಡಿಗೋಷನ್ ನಿಂದ ಸೆಂಟ್ರಲ್ ಮಾರುಕಟ್ಟೆಗೆ ಹೋಗುವ ದಾರಿ ಮಧ್ಯೆ ಇರುವಂತಹ ಹಳೆಯ ಆವರಣಗೋಡೆ ಇದಾಗಿದೆ. ಇದೀಗ ಒಂದು ಭಾಗ ಕುಸಿದಿದ್ದು, ಮಳೆ ಹೀಗೇ ಮುಂದುವರಿದಲ್ಲಿ ಸಂಪೂರ್ಣ ಗೋಡೆಯೂ ಕುಸಿಯುವ ಭೀತಿಯಲ್ಲಿದೆ. ಜಿಲ್ಲೆಯ ಹಲವಡೆ ಮಳೆಯಿಂದಾಗಿ ಸಣ್ಣಪುಟ್ಟ ಹಾನಿಯುಂಟಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಭತ್ತದ ಕೃಷಿಗೂ ಭಾರೀ ಸಂಕಷ್ಟ ಎದುರಾಗಿದೆ. ಕಟಾವಿಗೆ ಸಿದ್ದಗೊಂಡ ಪೈರುಗಳು ಮಳೆಯಿಂದಾಗಿ ನೆಲ ಕಚ್ಚುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಈ ಮಳೆಯು ಅಡಿಕೆ ಬೆಳೆಯ ಮೇಲೆಯೂ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಯೂ ಹೆಚ್ಚಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *