Connect with us

    LATEST NEWS

    ಜೈಲು ವಾರ್ಡನ್, ಸಿಐಎಸ್ಎಫ್ ಸಿಬಂದಿಗೆ ಸೋಂಕು, ಸುರತ್ಕಲ್ ಹೋಬಳಿಯಲ್ಲಿ ತೀವ್ರತೆ !

    ಮಂಗಳೂರು, ಜುಲೈ 2: ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹದ ವಾರ್ಡನ್ ಗೆ ಸೋಂಕು ತಗಲಿದೆ. ಜೈಲಿನಲ್ಲಿ ಸೋಂಕು ಆಗಿದ್ದ ಕೈದಿಯಿಂದಲೇ ರೋಗ ಅಂಟಿರುವ ಸಾಧ್ಯತೆಯಿದೆ.

    ವಾರದ ಹಿಂದೆ ಸೋಂಕು ಪೀಡಿತ ವಿಚಾರಣಾಧೀನ ಕೈದಿ ಒಬ್ಬನನ್ನು ವಾರ್ಡನ್, ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆನಂತರ ಎರಡ್ಮೂರು ದಿನಗಳ ಬಳಿಕ ವಾರ್ಡನ್ ಜೈಲಿನಲ್ಲಿಯೇ ಕುಸಿದು ಬಿದ್ದಿದ್ದಾರೆ. ಆನಂತರ ವಾರ್ಡನ್ ಅಧಿಕಾರಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ವಾರ್ಡನ್ ಗೆ ಕೋವಿಡ್ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ವಾರದ ಹಿ‌ಂದೆಯಷ್ಟೇ ಜೈಲಿನಲ್ಲಿದ್ದ ಇಬ್ಬರು ಕೈದಿಗಳಿಗೆ ಸೋಂಕು ಆಗಿತ್ತು.

    ಇದೇ ವೇಳೆ, ಸುರತ್ಕಲ್ ನಲ್ಲಿರುವ ಸಿಐಎಸ್ಎಫ್ ಭದ್ರತಾ ಯೋಧರ ಕ್ಯಾಂಪಿನಲ್ಲೂ ಕೊರೊನಾ ವಕ್ಕರಿಸಿದೆ. ಕ್ಯಾಂಪಿನಲ್ಲಿದ್ದ ಆರು ಮಂದಿ ಸಿಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಸುರತ್ಕಲ್ ನಲ್ಲಿರುವ ಬೃಹತ್ ಉದ್ಯಮ ಸಂಸ್ಥೆಯೊಂದರಲ್ಲಿ ಭದ್ರತೆ ನೋಡಿಕೊಳ್ಳುತ್ತಿದ್ದ ಸಿಬಂದಿಯಲ್ಲಿ ಸೋಂಕು ಕಾಣಿಸಿದ್ದು ಪರಿಸರದಲ್ಲಿ ಆತಂಕ ಹುಟ್ಟಿಸಿದೆ.

    ಸುರತ್ಕಲ್ ಹೋಬಳಿಯ ಕಾಟಿಪಳ್ಳ, ಜೋಕಟ್ಟೆ, ಸೂರಿಂಜೆ, ಕಾವೂರು ಭಾಗಕ್ಕೆ ಸೇರಿದ ಒಟ್ಟು 23 ಮಂದಿಯಲ್ಲಿ ಸೋಂಕು ಕಂಡುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply