Connect with us

    LATEST NEWS

    ಹೊಸದಾಗಿ ಕಾಸರಗೋಡು ಜಿಲ್ಲೆಯ ಯಾವುದೇ ಗಡಿಯನ್ನು ಮುಚ್ಚಿಲ್ಲ – ಜಿಲ್ಲಾಧಿಕಾರಿ ಸ್ಪಷ್ಟನೆ

    ಕಾಸರಗೋಡು ಜುಲೈ 2: ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳನ್ನು ನೂತನವಾಗಿ ಮುಚ್ಚುಗಡೆ ನಡೆಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದವರು ನುಡಿದರು.
    ಕಾಸರಗೋಡು ಜಿಲ್ಲೆಯ ಗಡಿಗಳನ್ನು ನೂತನವಾಗಿ ಮುಚ್ಚುಗಡೆ ನಡೆಸಲಾಗಿದೆ ಎಂಬ ಹುಸಿ ಪ್ರಚಾರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಿರುವುದಾಗಿ ಅವರು ಹೇಳಿದ್ದಾರೆ.


    ಕೊರೊನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಹಿಂದೆಯೇ ಗಡಿ ಪ್ರದೇಶಗಳನ್ನು ಮುಚ್ಚುಗಡೆ ನಡೆಸಲಾಗಿದ್ದು, ಈಗಲೂ ಅದೇ ರೀತಿ ಮುಂದುವರಿಯುತ್ತಿದೆ. ಅದಲ್ಲದೆ ನೂತನವಾಗಿ ಯಾವುದೇ ಮುಚ್ಚುಗಡೆಗೆ ಜಿಲ್ಲಾಡಳಿತೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.


    ಜೂನ್ 30ರಂದು ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿದ್ದ ಚೆಂಗಳ ಗ್ರಾಮಪಂಚಾಯತ್ ನಿವಾಸಿಯೊಬ್ಬರು ಮುಚ್ಚುಗಡೆ ನಡೆಸಿದ್ದ ಗಡಿ ಮೂಲಕ ಅಕ್ರಮ ಪ್ರವೇಶ ನಡೆಸಿ ಜಿಲ್ಲೆಗೆ ಬಂದಿರುವುದು ತನಿಖೆಯಲ್ಲಿ ಖಚಿತಗೊಂಡಿದೆ. ಈ ರೀತಿಯ ಅಕ್ರಮ ಪ್ರವೇಶ ತಡೆಯುವ ನಿಟ್ಟಿನಲ್ಲಿ ಎಲ್ಲ ಗಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್, ಆರೋಗ್ಯ, ಅರಣ್ಯ ಇಲಾಖೆಗಳ ಸಿಬ್ಬಂದಿಯನ್ನು ನಿಗಾ ಕರ್ತವ್ಯ ಕ್ಕೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply