Connect with us

KARNATAKA

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಗಗನ್ ಕಡೂರು ಕರೆತಂದು ಸ್ಥಳ ಮಹಜರು ನಡೆಸಿದ ಸಿಸಿಬಿ..!

Share Information

ಉದ್ಯಮಿ ಗೋವಿಂದ ಬಾಬು ಪೂಜಾರಿಗೆಚ ಕೊಟ್ಯಾಂತರ ರೂಪಾಯಿ ವಂಚಿಸಿದ ಚೈತ್ರಾ ಕುಂದಾಪುರ ಪ್ರಕರಣ ದಿನದಿಂದ ದಿನ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಚಿಕ್ಕಮಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆಚ ಕೊಟ್ಯಾಂತರ ರೂಪಾಯಿ ವಂಚಿಸಿದ ಚೈತ್ರಾ ಕುಂದಾಪುರ ಪ್ರಕರಣ ದಿನದಿಂದ ದಿನ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಸಿಸಿಬಿ ಕೂಡ ತೀವ್ರ ವಿಚಾಣೆ ನಡೆಸುತ್ತಿದ್ದು ಆರೋಪಿ ಗಗನ್​ ಕಡೂರು ಅವರನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳಿಗೆ ಕರಕೊಂಡು ಹೋಗಿ ಉದ್ಯಮಿ ಗೋವಿಂದ ಪೂಜಾರಿ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿ ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.

ಬೆಂಗಳೂರಿನಿಂದ ನೇರವಾಗಿ ಸಿಸಿಬಿ ಪೊಲೀಸರು ಚಿಕ್ಕಮಗಳೂರು ಐಬಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಎರಡನೇ ಮೀಟಿಂಗ್ ಚಿಕ್ಕಮಗಳೂರು ಐಬಿಯ ರೂಮ್ 5ರಲ್ಲಿ ನಡೆದಿತ್ತು.

ಇದೇ ಕೊಠಡಿಯಲ್ಲಿ ನಕಲಿ ವಿಶ್ವನಾಥ್ ಜಿ ಅವರನ್ನು ಚೈತ್ರಾ ಆ್ಯಂಡ್​ ಗ್ಯಾಂಗ್ ಗೋವಿಂದ ಪೂಜಾರಿಗೆ ಪರಿಚಯ ಮಾಡಿಕೊಟ್ಟಿತ್ತು.

ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆ ಹಾಗೂ ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಸಿಸಿಬಿ ಪೊಲೀಸರು ಗೋವಿಂದ ಪೂಜಾರಿ ಹಾಗೂ ಗಗನ್ ಸಮ್ಮುಖದಲ್ಲಿ ಆ ದಿನ ನಡೆದ ಘಟನೆ ಹಾಗೂ ಮಾತುಕತೆ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಪ್ರವಾಸಿ ಮಂದಿರದ ಇಬ್ಬರು ಸಿಬ್ಬಂದಿಗಳನ್ನೂ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಆ ದಿನ ರೂಂ ಪಡೆಯಲು ಯಾರೋ ಫೋನ್​ ಮಾಡಿದ್ದರು‌.

ಫ್ರೆಶ್ ಅಪ್​ಗೆ ಬಂದಿರಬಹುದು ಎಂದು ಕೊಠಡಿ ನೀಡಿದ್ದೆವು ಎಂದು ಪ್ರವಾಸಿ ಮಂದಿರದ ಸಿಬ್ಬಂದಿಗಳು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ಹಾಗೂ ಸ್ಥಳ ಮಹಜರು ಕಾರ್ಯ ಮುಗಿಯುತ್ತಿದ್ದಂತೆ ಸಿಸಿಬಿ ಪೊಲೀಸರು ಗಗನ್ ಕಡೂರುನನ್ನು ಕಡೂರಿನ ಮನೆಗೆ ವಿಚಾರಣೆ ಹಾಗೂ ಸ್ಥಳ ಮಹಜರು ಮಾಡಲು ಕರೆತಂದರು.

ತರೀಕೆರೆಯ ರಮೇಶ್​ಗೆ ವಿಶ್ವನಾಥ್ ಜೀ ಆಗಲು ಟ್ರೈನಿಂಗ್ ನೀಡಿದ್ದೇ ಗಗನ್ ಮನೆಯಲ್ಲಿ. ಹಾಗಾಗಿ ಈತನ ಮನೆಯಲ್ಲಿ ವಿಚಾರಣೆ ಹಾಗೂ ಸ್ಥಳ ಮಹಜರು ಮಾಡಿದರು.

ನಂತರ ಕೆ ಎಂ ರಸ್ತೆಯಲ್ಲಿರುವ ಗಗನ್ ಕಡೂರಿನ ಹೆಚ್​ಡಿಎಫ್​ಸಿ ಬ್ಯಾಂಕಿನ ಅಕೌಂಟ್ ಪರಿಶೀಲನೆಯನ್ನು ನಡೆಸಿದರು.

ಅಕೌಂಟ್​ನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿ, ನಂತರ ಎಪಿಎಂಸಿ, ಪ್ರವಾಸಿ ಮಂದಿರ, ಸ್ಥಳಗಳಲ್ಲಿ ಮಹಜರು ಕಾರ್ಯ ನಡೆಸುವುದರ ಮೂಲಕ ಮಹತ್ವದ ಕೆಲ ಅಂಶಗಳನ್ನು ಕಲೆ ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸ್ಥಳ ಮಹಜರಿನ ನಂತರ ಆರೋಪಿ ಗಗನ್ ಕಡೂರು ಅವರನ್ನು ಶಿವಮೊಗ್ಗಕ್ಕೆ ಕರೆತಂದ ಸಿಸಿಬಿ ಪೊಲೀಸರು, ಶಿವಮೊಗ್ಗದ ಗೌಡ ಸಾರಸ್ವತ ಕಲ್ಯಾಣ ಮಂದಿರದ ಮಥುರ ಪ್ಯಾರಡೈಸ್ ರಸ್ತೆಯ ಬಳಿ ಸ್ಥಳ ಮಹಜರು ಮಾಡಿದರು.

ಇದೇ ಸ್ಥಳದಲ್ಲಿ ಉದ್ಯಮಿಯಿಂದ 50 ಲಕ್ಷ ರೂ. ಗಳನ್ನು ಗಗನ್ ಕಡೂರು ಪಡೆದು ಚೈತ್ರ ಕುಂದಾಪುರಗೆ ನೀಡಿದ್ದ ಎಂಬ ಅಂಶ ಬಯಲಾಗಿದೆ,


Share Information
Advertisement
Click to comment

You must be logged in to post a comment Login

Leave a Reply