Connect with us

LATEST NEWS

ಕೋಟ ಗಿಳಿಯಾರು ಸಮೀಪ ಗೇರು ತೋಟಕ್ಕೆ ಬೆಂಕಿ ಆತಂಕದಲ್ಲಿ ಸ್ಥಳೀಯರು

ಕೋಟ ಗಿಳಿಯಾರು ಸಮೀಪ ಗೇರು ತೋಟಕ್ಕೆ ಬೆಂಕಿ ಆತಂಕದಲ್ಲಿ ಸ್ಥಳೀಯರು

ಉಡುಪಿ ಮಾರ್ಚ್ 7: ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗುತ್ತಾ ಇದ್ದು, ಬಿಸಿಲ ಧಗೆ ಜಿಲ್ಲೆಯ ಕೆಲವೆ ಕಡೆಗಳಲ್ಲಿ ಅಲ್ಲಲ್ಲಿ ಅರಣ್ಯಗಳು ಬೆಂಕಿಯ ಕೆನ್ನಾಲಿಗೆ ತುತ್ತಾಗುತ್ತಿದೆ. ಉಡುಪಿ ಜಿಲ್ಲೆಯ ಗಿಳಿಯಾರು ಗ್ರಾಮದ ಭಾಸ್ಕರ ಶೆಟ್ಟಿ ಅವರ ಗೇರು ತೋಟಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ಒಣ ಸೌದೆ ,ತರಗೆಲೆಗಳಿಗೆ ಹಬ್ಬಿದ ಬೆಂಕಿ ತೋಟದ ತುಂಬಾ ಹರಡಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ನೂರಾರು ಗೇರುಮರಗಳು ಆಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಕುಂದಾಪುರ ವಿಭಾಗದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಮುಂಜಾನೆ ಒಂದು ಎಕರೆ ತೋಟದಲ್ಲಿ ಹರಡಿ ಬೆಂಕಿ‌ ನಂದಿಸಲಾಗಿತು.ಆದರೆ ಸಂಜೆ ವೇಳೆ ಗೆ‌ ಮತ್ತೆ ಮತ್ತಷ್ಟು ಎಕರೆಗೆ ಪ್ರದೇಶದಲ್ಲಿ ಬೆಂಕಿ ಪಸರಿಸಿದೆ. ಸುತ್ತಮುತ್ತಲಿನ ಮನೆಗಳು ಇದ್ದು ಸ್ಥಳೀಯ ನಿವಾಸಿ ಗಳು ಆತಂಕ ಗೊಂಡಿದ್ದಾರೆ. ಸಂಜೆ ವೇಳೆಗೆ ಮತ್ತೆ ಆಗಮಿಸಿದ ಅಗ್ನಿ ಶಾಮಕದಳ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *