LATEST NEWS
ಬೈಂದೂರು – ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರು ಸಮುದ್ರ ಪಾಲು…!!
ಕುಂದಾಪುರ ಅಗಸ್ಟ್ 28: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ಭಾನುವಾರ ಸಂಜೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಅಳೆಗದ್ದೆಯಲ್ಲಿ ನಡೆದಿದೆ.
ಶಿರೂರು ಗ್ರಾಮದ ಕೆಸರಕೋಡಿ ನಝಾನ್ (24) ಮತ್ತು ಮುಸಾಬ್(22) ದುರ್ದೈವಿಗಳು, ಸಂಜೆ ವೇಳೆ ಕೈರುಪಣಿ ಮೀನುಗಾರಿಕೆಗಾಗಿ ಇವರು ಸಮುದ್ರಕ್ಕೆ ಹೋಗಿದ್ದು, ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿ ಕಡಲಿಗೆ ಬಿದ್ದು, ಕಣ್ಮರೆಯಾಗಿದ್ದಾರೆ. ಅಕ್ಕಪಕ್ಕದಲ್ಲಿದ್ದ ಮೀನುಗಾರರು ಕಡಲಿಗೆ ರಕ್ಷಿಸಲು ಪ್ರಯತ್ನಿಸದರಾದರೂ ಸಫಲತೆ ಕಂಡಿಲ್ಲ. ಕಡಲಿಗೆ ಬಿದ್ದು ಕಣ್ಮರೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕಡಲ ಪ್ರಕ್ಷುಬ್ಧತೆ ಇಲ್ಲಿದ್ದರು. ಕೈರಂಪಳೆ ಮೀನುಗಾರಿಕ ನಡೆಯುತ್ತಿದೆ. ಆಚಾನಕ ಎದುರಾದ ಭಾರಿ ಅಲೆ ಅವರನ್ನು ಸೆಳೆದೊಯಿದೆ. ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
You must be logged in to post a comment Login