Connect with us

    DAKSHINA KANNADA

    3.5 ಲಕ್ಷ ಕಿಂತಲೂ ಅಧಿಕ ಮತಗಳ ಅಂತರದಿಂದ ಕ್ಯಾ. ಬ್ರಿಜೆಶ್ ಚೌಟ ಗೆಲುವು: ನಳಿನ್ ಕುಮಾರ್ ಕಟೀಲ್

    ಮಂಗಳೂರು :  ಏಪ್ರಿಲ್ 26 ರಂದು ನಡೆಯುವ ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ ಪೂರ್ವ ಭಾವಿ ಸಭೆಯು ಜಿಲ್ಲಾಧ್ಯಕ್ಷರಾದ  ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲೆಯ ಚುನಾವಣಾ ಕಾರ್ಯಾಲಯ ದಲ್ಲಿ ನಡೆಯಿತು.

    ಮಾನ್ಯ ಸಂಸದರಾದ  ನಳಿನ್ ಕುಮಾರ್ ಕಟೀಲ್ಅವರು ಮಾತನಾಡಿ ಮೋದಿ ಸರಕಾರ ದ ಅವಧಿಯಲ್ಲಿ ತಾನು ಜಿಲ್ಲೆಗೆ ತಂಡ ಒಂದು ಲಕ್ಷ ಕೋಟಿ ಅನುದಾನದ ಮಾಹಿತಿ ಯನ್ನು ಮನೆ ಮನೆಗೆ ತಿಳಿಸುವಂತೆ ಕರೆ ನೀಡಿದರು. ನಿರಂತರ 15 ವರ್ಷಗಳ ಧೀರ್ಘ ಅವಧಿ ಗೆ ಸಂಸದನಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ದೇವ ದುರ್ಲಭ ಕಾರ್ಯಕರ್ತರಿಗೆ ಕ್ರತಜ್ಞತೆ ಯನ್ನು ಸಲ್ಲಿಸುತ್ತಾ ಮುಂದಿನ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಎಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕೆಂದು ಚುನಾವಣಾ ಕಾರ್ಯನಿರ್ವ ಹಣ ತಂಡಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
    ವಿಭಾಗ ಸಹ ಪ್ರಭಾರಿ ಗೋಪಾಲ ಕೃಷ್ಣ ಹೇರಳೆ,ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್,ನಿರ್ವಹಣಾ ಸಮಿತಿ ಸಂಚಾಲಕ ನಿತಿನ್ ಕುಮಾರ್,ಮಾಜಿ ಶಾಸಕರು, ಹಾಲಿ ಶಾಸಕರು,ಜಿಲ್ಲಾ ಪದಾಧಿಕಾರಿಗಳು,ಮಂಡಲ ,ಮೋರ್ಚಾ ಪದಾಧಿಕಾರಿಗಳು,ಮಾದ್ಯಮ ಪ್ರಮುಖರು ಉಪಸ್ಥಿತ ರಿದ್ದರು..

    Share Information
    Advertisement
    Click to comment

    You must be logged in to post a comment Login

    Leave a Reply