Connect with us

LATEST NEWS

ಓವರ್ ಟೇಕ್ ವಿಚಾರಕ್ಕೆ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಗಲಾಟೆ..ಟ್ರಾಫಿಕ್ ಜಾಮ್ ನಿಂದ ಸಂಕಷ್ಟಕೀಡಾದ ಸಾರ್ವಜನಿಕರು

ಮಂಗಳೂರು ಫೆಬ್ರವರಿ 2: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ನಡುವೆ ನಡು ರಸ್ತೆಯಲ್ಲಿ ನಡೆದ ಮಾತಿನ ಚಕಮಕಿಗೆ ಸಾರ್ವಜನಿಕರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿ ಬಳಿ ಈ ಘಟನೆ ನಡೆದಿದ್ದು, 15 ನಂಬ್ರದ ಮಂಗಳಾದೇವಿಯಿಂದ ಸುರತ್ಕಲ್ ಗೆ ಸಂಚರಿಸುವ ಮತ್ತು ಮತ್ತು 60 ನಂಬ್ರದ ಗೋರಿಗುಡ್ಡೆಯಿಂದ ಆಕಾಶಭವನಕ್ಕೆ ಬರುವ ಬಸ್ ನಿರ್ವಾಹಕರ ಜಗಳದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೆಳ್ಳಂಬೆಳಿಗ್ಗೆ ಕಚೇರಿ ಕೆಲಸಕ್ಕೆ ತೆರಳುವ ಸಾರ್ವಜನಿಕರು ಟ್ರಾಫಿಕ್ ಜಾಮ್ ನಿಂದಾಗಿ ಬಸ್ ಚಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಘಟನೆ ಸಂಪೂರ್ಣ ವಿವರ ಪಡೆದು ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಂಡರು. ವಿವಾದಗಳು ಇದ್ದರೆ ಪ್ರಯಾಣಿಕರನ್ನು ಬಸ್ಸಿನಲ್ಲಿ ಕುಳಿತುಕೊಳ್ಳಿಸಿ ವಾಗ್ವಾದ ಮಾಡುವುದರ ಬದಲಿಗೆ ಪೊಲೀಸ್ ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಿ. ಈ ರೀತಿ ದಾರಿ ಮಧ್ಯೆ ಟ್ರಾಫಿಕ್‌ ಜಾಂಗೆ ಕಾರಣರಾಗಬೇಡಿರಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *