LATEST NEWS
ಟೊಯಿಂಗ್ ವಾಹನಕ್ಕೆ ಬುಲೆಟ್ ಡಿಕ್ಕಿ ಸವಾರ ಸಾವು
ಟೊಯಿಂಗ್ ವಾಹನಕ್ಕೆ ಬುಲೆಟ್ ಡಿಕ್ಕಿ ಸವಾರ ಸಾವು
ಮಂಗಳೂರು ಅಗಸ್ಟ್ 27: ಟೊಯಿಂಗ್ ವಾಹನಕ್ಕೆ ಬುಲೆಟ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತ ಬುಲೆಟ್ ಸವಾರ ತೊಕ್ಕೊಟ್ಟು ನಿವಾಸಿ ಅಭಿಷ್ ನಾಯರ್ ಎಂದು ಗುರುತಿಸಲಾಗಿದೆ.
ಮಂಗಳೂರಿನ ಉಳ್ಳಾಲ ನೇತ್ರಾವತಿ ನದಿ ಸೇತುವೆ ಸಮೀಪ ಈ ಘಟನೆ. ಟೊಯಿಂಗ್ ವಾಹನಕ್ಕೆ ಹಿಂಬದಿಯಿಂದ ಬುಲೆಟ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಸವಾರ ಅಭಿಷ್ ರಸ್ತೆಗೆಸೆಯಲ್ಪಟ್ಟರು, ಕೂಡಲೇ ಸ್ಥಳೀಯರು ಅಭಿಷ್ ನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಭಿಷ್ ವಾರದ ಹಿಂದೆಯಷ್ಟೇ ವಿದೇಶದಿಂದ ಊರಿಗೆ ಬಂದಿದ್ದರು. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
You must be logged in to post a comment Login