LATEST NEWS
ಖ್ಯಾತ ಬಿಲ್ಡರ್ ಕೆ.ಸಿ ನಾಯಕ್ ಪುತ್ರಿ ಆತ್ಮಹತ್ಯೆ
ಮಂಗಳೂರು ಸೆಪ್ಟೆಂಬರ್ 9: ಮಂಗಳೂರಿನ ಖ್ಯಾತ ಬಿಲ್ಡರ್ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಮಹಾಬಲೇಶ್ವರ ಬಿಲ್ಡರ್ಸ್ ಹಾಗೂ ಕ್ರಡಾಯಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶಕ್ತಿನಗರದ ನಿವಾಸಿ ಕೆ.ಸಿ.ನಾಯಕ್ ಅವರ ಪುತ್ರಿ ರೇಶ್ಮಾ ನಾಯಕ್ (೫೦) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಾತ್ರಿ ಸುಮಾರು 8:30 ರ ಹೊತ್ತಿಗೆ ಶಕ್ತಿನಗರದ ತಂದೆ ಕೆ.ಸಿ. ನಾಯಕ್ ಅವರ ಮನೆಯ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಕೆಲವು ವರ್ಷಗಳಿಂದ ಪತಿಯಿಂದ ಡಿವೋರ್ಸ್ ಪಡೆದಿದ್ದ ರೇಶ್ಮಾ ನಾಯಕ್ ಪೋಷಕರೊಂದಿಗೆ ಶಕ್ತಿಗರದ ಮನೆಯಲ್ಲಿ ವಾಸಿಸುತಿದ್ದರು ಎಂದು ಹೇಳಲಾಗಿದೆ.ಆತ್ಮಹತ್ಯೆಗೆ ನೈಜ ಕಾರಣ ಎನೆಂದು ತಿಳಿದುಬಂದಿಲ್ಲ.ಘಟನಾಸ್ಥಳಕ್ಕೆ ತೆರಳಿದ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login