Connect with us

DAKSHINA KANNADA

ರೈಲಿಗೆ ಸಿಲುಕಿ ಬಾಲಕ ದುರ್ಮರಣ

ರೈಲಿಗೆ ಸಿಲುಕಿ ಬಾಲಕ ದುರ್ಮರಣ

ಮಂಗಳೂರು,ಸೆಪ್ಟಂಬರ್ 23: ಚಾಕ್ಲೇಟ್ ತರಲು ಅಂಗಡಿಗೆ ತೆರಳಿದ್ದ ಬಾಲಕನೋರ್ವ ರೈಲಿನಡಿಗೆ ಸಿಲುಕಿ ದುರ್ಮರಣಕ್ಕೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ .ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮಹಾಕಾಳಿ ಪಡ್ಪು ನಿವಾಸಿ ಅನ್ವರ್ ಎಂಬುವರ ಮಗ ಹಫೀಲ್ (7) ಸಮೀಪದಲ್ಲೇ ಇರುವ ಅಂಗಡಿಯೊಂದಕ್ಕೆ ಚಾಕಲೇಟು ತರಲು ತೆರಳಿದ್ದ.

ಅಂಗಡಿಯಿಂದ ಚಾಕ್ಲೇಟ್ ಖರೀದಿಸಿ ರೈಲ್ವೆ ಹಳಿ ದಾಟಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಕೇರಳದಿಂದ ಬರುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪಘಾತದ ತೀವ್ರತೆಗೆ ಬಾಲಕನ ದೇಹ ಎರಡು ತುಂಡಾಗಿದೆ.ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ.

 

Share Information
Advertisement
Click to comment

You must be logged in to post a comment Login

Leave a Reply