Connect with us

    KARNATAKA

    ಮುಂಡಗೋಡು: ಬಸ್‌-ಬೈಕ್‌ ನಡುವೆ ಭೀಕರ ಅಪಘಾತಕ್ಕೆ ಸವಾರರಿಬ್ಬರು ಮೃತ್ಯು.

    ಕಾರವಾರ :  ಬೈಕ್ ಹಾಗೂ ಬಸ್ ನಡುವೆ ನಡೆದ  ಭೀಕರ ಅಪಘಾತದಲ್ಲಿ ಬೈಕ್ ಸವಾರಿಬ್ಬರು ಮೃತಪಟ್ಟ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಶಿಂಗ್ನಳ್ಳಿ ಸಮೀಪ ಭಾನುವಾರ ನಡೆದಿದೆ.

    ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ(38) ಎಂಬವನು ಸ್ಥಳದಲ್ಲಿಯೆ ಮೃತಪಟ್ಟರೆ, ಹುಡೆ ಗ್ರಾಮದ ಜಾಫರಸಾಬ ದೇವಿಹೋಸೂರ(32) ಎಂಬವರು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಮುಂಡಗೋಡಿನಿಂದ ಹಾನಗಲ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಾಳಾದಿಂದ ಮುಂಡಗೋಡನತ್ತ ಬರುತ್ತಿದ್ದ ಬೈಕ್ ನಡುವೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ಶಿಂಗ್ನಳ್ಳಿ ಜಲಾಶಯ ಕ್ರಾಸ್ ಸನಿಹ ಡಿಕ್ಕಿ ಸಂಭವಿಸಿತ್ತು. ಮುಂಡಗೋಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply