Connect with us

LATEST NEWS

ಡೈರೆಕ್ಟರ್ ಸ್ಕ್ರೀಪ್ಟ್ ಚೆನ್ನಾಗಿದ್ದರೆ ಕನ್ನಡಕ್ಕೂ ಸೈ : ಪೂಜಾ ಹೆಗ್ಡೆ

ಉಡುಪಿ, ಅಗಸ್ಟ್ 29 : ಖ್ಯಾತ ಬಾಲಿವುಡ್ ತಾರೆ ಪೂಜಾ ಹೆಗ್ಡೆ ತವರು ಜಿಲ್ಲೆ ಉಡುಪಿಗೆ ಆಗಮಿಸಿದ್ದಾರೆ.

ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನ ಆಗಮಿಸಿದ ನಟಿ ಪೂಜಾ ಹೆಗ್ಡೆ ಅವರು ದೇವಿಗೆ ವಿಶೇಷಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾ ಹೆಗ್ಡೆ ದೇವರ ಪೂಜೆಗಾಗಿ ವರ್ಷಗಳ ನಂತರ ಊರಿಗೆ ಬಂದಿದ್ದೇನೆ. ತವರೂರಿನ ಮನೆಗೆ ಬಂದು ಎರಡು ವರ್ಷಗಳು ದಾಟಿವೆ. ಊರಿಗೆ ಬಂದಾಗ ತುಂಬಾ ಖುಶಿ ಅನಿಸುತ್ತದೆ ಎಂದರು. ಪ್ರಸ್ತುತ ತೆಲುಗಿನ ಒಂದು ಚಿತ್ರದಲ್ಲಿ ನಟಿಸ್ತಾ ಇದ್ದೇನೆ. ಬಾಲಿವುಡ್ ನಲ್ಲಿ ಮೂರು ಸ್ಕ್ರಿಪ್ಟ್ ಬಂದಿವೆ ಆದರೆ ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ.

ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದ್ರೆ ಮಾತ್ರ ಚಿತ್ರಕ್ಕೆ ಒಪ್ಪಿಕೊಳ್ಳುತ್ತೇನೆ ಎಂದರು ಪೂಜಾ ಹೆಗ್ಡೆ. ಕನ್ನಡದಲ್ಲೂ ಆಫರ್ ಬಂದರೆ ನಟಿಸ್ತೀರಾ ಎಂದು ಪತ್ರಕರ್ತರು ಕೆಳಿದ ಪ್ರಶ್ನೆಗೆ ಮುಗುಳು ನಕ್ಕ ತಾರೆ ಒಳ್ಳೇ ಡೈರೆಕ್ಟರ್ ಮತ್ತು ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ಕನ್ನಡದಲ್ಲೂ ನಟಿಸಲು ಸಿದ್ದ ಎಂದಳು. ಮದುವೆಯ ಯೋಚನೆ ಏನಾದರೂ ಇದೇಯಾ ಎಂದು ಕೇಳಿದ ಪ್ರಶ್ನೆಗೆ ಮದುವೆ ಬಗ್ಗೆ ಯೋಚಿಸುವಷ್ಟು ವಯಸ್ಸಾಗಿಲ್ಲ, ನಾನು ಇನ್ನೂ ಈ ಕ್ಷೇತ್ರದಲ್ಲಿ ಹೆಸರು ಮಾಡಬೇಕಿದೆ.

ನನ್ನ ಮುಂದೆ ದೊಡ್ಡ ದೊಡ್ಡ ಕನಸುಗಳಿವೆ ಎಂದರು. ಪೂಜಾ ಹೆಗ್ಡೆ ಅವರು ಇದೀಗ ಬಾರಿ ಬೇಡಿಕೆಯ ತಾರೆಯಾಗಿದ್ದಾರೆ. ಹಿಂದಿಯ ಮೊಹೆಂಜೋದಾರೋ,ತಮಿಳಿನ ಮುಗ್ಗುಮುಡಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ಡಿಜೆ ಯಲ್ಲಿ ನಟಿಸಿದ್ದ ಪೂಜಾ ಹೆಗ್ಡೆ ಬಹುಬೇಡಿಕೆಯ ನಟಿಯಾಗಿದ್ದಾಳೆ. ಈಗಾಗಲೇ ಹಿಂದಿಯ ಬಾಲಿವುಡ್, ತೆಲುಗಿನ ಟಾಲಿವುಡ್ ಹಾಗೂ ಹಾಲಿವುಡ್ ಸಿನೆಮಾಗಳಲ್ಲಿ ನಟಿಸಿ ಯಶಸ್ವಿ ತಾರೆಯಾಗಿದ್ದಾಳೆ.

ವಿಡಿಯೋ

Share Information
Continue Reading
Advertisement
Click to comment

Leave a Reply

Your email address will not be published. Required fields are marked *