Connect with us

    LATEST NEWS

    ಬಿಜೆಪಿ ಶಾಸಕರ ಧರಣಿಗೆ ಮಣಿದ ಸರಕಾರ – ಮೂಡಬಿದಿರೆಯ ಅಧಿಕಾರಿಗಳ ಅಮಾನತು ಆದೇಶ ವಾಪಾಸ್

    ಮಂಗಳೂರು ಅಗಸ್ಟ್ 15: ದಕ್ಷಿಣಕನ್ನಡ ಜಿಲ್ಲೆಯ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿ ಹಾಗೂ ಮೂಡಬಿದಿರೆ ಕ್ಷೇತ್ರದ ಅಧಿಕಾರಿಗಳ ಅಮಾನತು ಆದೇಶ ವಾಪಾಸ್ ಗೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲೆಯ ಶಾಸಕರು ನಡೆಸಿದ ಧರಣಿಗೆ ಸರಕಾರ ಮಣಿದಿದ್ದು, ಅಧಿಕಾರಿಗಳ ಅಮಾನತು ಆದೇಶವನ್ನು ಅಧಿಕೃತವಾಗಿ ವಾಪಾಸ್ ಪಡೆದಿದೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಮಾನತು ಆದೇಶವನ್ನು ಸರ್ಕಾರ ವಾಪಾಸ್ ಪಡೆದಿದೆ. ಮೂಡಬಿದ್ರೆ ತಾಲೂಕು ಪಂಚಾಯತ್ ಇಓ ದಯಾವತಿಯವರನ್ನು ಶಿಷ್ಟಾಚಾರ ಪಾಲಿಸದ ಹಿನ್ನೆಲೆ ದ‌‌.ಕ ಜಿ.ಪಂ ಸಿಇಓ ಅಮಾನತು ಮಾಡಿದ್ದರು.


    ಇರುವೈಲ್ ಗ್ರಾ.ಪಂ ಕಟ್ಟಡ ಉದ್ಘಾಟನೆ ಆಮಂತ್ರಣದಲ್ಲಿ ಶಿಷ್ಟಾಚಾರ ಪಾಲಿಸದ ಹಿನ್ನೆಲೆ ಅಮಾನತು ಮಾಡಿದ್ದರು. ಆದರೆ ಅಮಾನತು ವಿರೋಧಿಸಿ ಇಂದು ಡಿಸಿ ಕಚೇರಿ ಎದುರು ಬಿಜೆಪಿ ಶಾಸಕರು ಹಾಗೂ ಸಂಸದ ನಳಿನ್ ಕಟೀಲ್ ಧರಣಿ ನಡೆಸಿದ್ದರು. ಅಮಾನತು ವಾಪಾಸ್ ಪಡೆಯಲು ಆಗ್ರಹಿಸಿ ಧರಣಿ ನಡೆಸಿದ್ದರು. ಕೊನೆಗೆ ಡಿಸಿ ಮುಲ್ಲೈ ಮುಗಿಲನ್ ಆಗಮಿಸಿ ಇಂದು ಸಂಜೆಯೊಳಗೆ ಅಮಾನತು ವಾಪಾಸ್ ಪಡೆಯುವ ಭರವಸೆ ನೀಡಿದ್ದರು. ಹೀಗಾಗಿ ಪ್ರತಿಭಟನೆ ಕೈ ಬಿಟ್ಟಿದ್ದ ಬಿಜೆಪಿ ಶಾಸಕರು ಇಂದು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯದೇ ಇದ್ದರೆ ನಾಳೆ ಮತ್ತೆ ಧರಣಿ ಕೂರುವ ಎಚ್ಚರಿಕೆ ನೀಡಿದ್ದರು.

    ಅದರಂತೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಆದೇಶ ವಾಪಾಸ್ ಪಡೆಯಲು ಮನವಿ ಮಾಡಿದ್ದರು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಮೂಡಬಿದ್ರೆ ತಾ.ಪಂ ಇಓ ದಯಾವತಿಗೆ ಎಚ್ಚರಿಕೆ ಕೊಟ್ಟು ಅಮಾನತು ಆದೇಶ ವಾಪಾಸ್ ಪಡೆಯಲಾಗಿದೆ. ಜೊತೆಗೆ ಇರುವೈಲ್ ಗ್ರಾ.ಪಂ ಪಿಡಿಓ ಕಾಂತಪ್ಪ ಅಮಾನತು ಆದೇಶವೂ ವಾಪಾಸ್ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಬಿಜೆಪಿ ಇಂದು ನಡೆಸಿದ ಹೋರಾಟದ ಫಲವಾಗಿ ಅಮಾನತು ರದ್ದಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply