Connect with us

    LATEST NEWS

    ಇಂದು ಮತ್ತೆ ಮಂಗಳೂರಿಗೆ ಅಮಿತ್ ಷಾ ?

    ಇಂದು ಮತ್ತೆ ಮಂಗಳೂರಿಗೆ ಅಮಿತ್ ಷಾ ?

    ಮಂಗಳೂರು ಅಕ್ಟೋಬರ್ 04: ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾಯಾತ್ರೆಯಲ್ಲಿ ಭಾಗವಹಿಸಿ ನಿನ್ನೆ ದಿಢೀರನೆ ದೆಹಲಿಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಮಂಗಳೂರಿಗೆ ಬರಲಿದ್ದಾರೆ.ದೆಹಲಿಯಲ್ಲಿ ತುರ್ತು ಸಭೆ ಆಯೋಜನೆಗೊಂಡಿದ್ದ ಹಿನ್ನಲೆಯಲ್ಲಿ ಏಕಾಎಕಿ ಮಂಗಳೂರಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಅಮಿತ್ ಷಾ ನಿನ್ನೆ ರಾತ್ರಿ ವಿಶೇಷ ವಿಮಾನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು.

    ಆದರೆ ಇಂದು ರಾತ್ರಿ ಮತ್ತೆ ಅಮಿತ್ ಷಾ ಮಂಗಳೂರಿಗೆ ಬರಲಿದ್ದಾರೆ ಎಂದು ಬಿಜೆಪಿ ಬಲ್ಲ ಮೂಲಗಳು ಖಚಿತ ಪಡಿಸಿವೆ. ಇಂದು ರಾತ್ರಿ ಮಂಗಳೂರಿಗೆ ವಿಶೇಷ ವಿಮಾನ ಮೂಲಕ ಆಗಮಿಸಲಿರುವ ಅಮಿತ್ ಷಾ ಮಂಗಳೂರಿನಿಂದ ನೇರವಾಗಿ ಕೇರಳಕ್ಕೆ ತೆರಳಲಿದ್ದಾರೆ.

    ಈ ಹಿನ್ನಲೆಯಲ್ಲಿ ಮಂಗಳೂರಿನಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಕಿದ್ದ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ತೆರವು ಮಾಡದಂತೆ ಕಾರ್ಯಕರ್ತರಿಗೆ ಬಿಜೆಪಿ ಮುಖಂಡರು ಸೂಚನೆ ನೀಡಿದ್ದಾರೆ. ಮತ್ತೆ ಹಿಂದಿರುಗಿ ದೆಹಲಿಗೆ ತೆರಳುವ ಮೊದಲು ಅಮಿತ್ ಷಾ ಮಂಗಳೂರಿನಲ್ಲಿ ವಾಸ್ತವ್ಯ ಹೂಡುವ ಸಾದ್ಯತೆ ಇದೆ. ಈ ಹಿನ್ನಲೆಯಲ್ಲಿ ಮತ್ತೆ ಕಮಲ ಪಾಳಯದಲ್ಲಿ ಚಟುವಟಿಕೆ ಚುರಕುಗೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply