LATEST NEWS
ಪ್ರಮೋದ್ ಮಧ್ವರಾಜ್ ಬಿಜೆಪಿಯ ವಿಚಾರಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದು ಖುಷಿಯ ವಿಚಾರ – ಉಡುಪಿ ಜಿಲ್ಲಾ ಬಿಜೆಪಿ
ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಬಿಜೆಪಿ ನಾಯಕರ ಮತ್ತು ಬಿಜೆಪಿಯ ವಿಚಾರಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂಬುದೇ ನಮಗೆ ಖುಷಿಯ ವಿಚಾರ ಎಂದು ಜಿಲ್ಲಾ ಬಿಜೆಪಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಪಕ್ಷದಲ್ಲಿ ಸ್ವಾಗತವಿದೆ. ಆದರೆ ಪ್ರಮೋದ್ ಮಧ್ವರಾಜ್ ವಿಷಯದಲ್ಲಿ ನಮ್ಮ ನಾಯಕರು ತೀರ್ಮಾನ ಮಾಡಬೇಕಿದೆ. ಅವರು ಬರ್ತಾರಾ ಎಂಬುದು ಅವರಿಗೆ ಬಿಟ್ಟ ವಿಚಾರ ಸೇರಿಸಿಕೊಳ್ಳುವುದು ನಮಗೆ ಬಿಟ್ಟ ವಿಚಾರ. ಈ ಹಿಂದೆ ನಮಗೆ ದನ ಬಂದರೆ ಕರು ಬರುತ್ತದೆ ಎಂಬ ವಿಷಯದಲ್ಲಿ ಎರಡು ಮೂರು ಬಾರಿ ಕಹಿ ಅನುಭವ ಆಗಿದೆ.ಅವರ ಮಾನಸಿಕತೆ ನಮಗೆ ಅರ್ಥವಾಗುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ನಮ್ಮ ನಾಯಕರು ಆಗ ಪರಿಗಣಿಸಬಹುದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
You must be logged in to post a comment Login