Connect with us

    DAKSHINA KANNADA

    ಪುತ್ತಿಲ ಪರಿವಾರಕ್ಕೆ ಎಚ್ಚರಿಕೆ ಕೊಟ್ಟ ಬಿಜೆಪಿ ಯುವ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ

    ಪುತ್ತೂರು ಜನವರಿ 16: ಅಯೋಧ್ಯೆಯ ಅಕ್ಷತೆ ವಿತರಣೆ ಮಾಡಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಪುತ್ತಿಲ ಪರಿವಾರದ ವಿರುದ್ಧ ಬಿಜೆಪಿ ಯುವ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಹರಿಹಾಯ್ದಿದ್ದಾರೆ.


    ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಯುವಕರು ಹಲ್ಲೆ ಮಾಡಿರುವುದು ಖಂಡನೀಯ, ನಮಗೆ ಶಸ್ತ್ರ ಹಿಡಿದು ಗೊತ್ತು, ಶಾಸ್ತ್ರ ಓದಿ ಕೂಡ ಗೊತ್ತು ಎಂದು ಪುತ್ತಿಲ ಪರಿವಾರಕ್ಕೆ ಕಿಶೋರ್ ಕುಮಾರ್ ಬೊಟ್ಯಾಡಿ ಎಚ್ಚರಿಕೆ ನೀಡಿದರು. ಪುತ್ತಿಲ ಅವ್ರು ಒಂದು ಕಡೆ ಬಿಜೆಪಿಗೆ ಬರಬೇಕು ಎಂದು ಹೇಳುತ್ತಿದ್ದಾರೆ. ಅದನ್ನ ನಮ್ಮ ಬಿಜೆಪಿಯ ಹಿರಿಯ ನಾಯಕರು ನಿರ್ಧರಿಸ್ತಾರೆ. ಬಿಜೆಪಿಯ ಹಿರಿಯ ನಾಯಕರ ನಿರ್ಧಾರಕ್ಕೆ ನಾವೂ ಬದ್ಧರಾಗಿರ್ತೇವೆ.


    ಆದ್ರೆ ಈ ಪುತ್ತಿಲ ಪರಿವಾರ ಒಂದು ಕಡೆ ಸಂಧಾನ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡೋದು ಇದು ಸರಿಯಲ್ಲ, ಬಿಜೆಪಿ ಕಾರ್ಯಕರ್ತ ಸಂತೋಷ್ ಅಯೋಧ್ಯೆಯ ಅಕ್ಷತೆ ವಿತರಣೆ ಮಾಡಿ ಹಿಂತಿರುಗುವಾಗ ಹಲ್ಲೆ ಮಾಡಿದ್ದಾರೆ. ಪುತ್ತಿಲ ಪರಿವಾರದ ಧನಂಜಯ ಮತ್ತು ತಂಡದವರು ಹಲ್ಲೆ ಮಾಡಿದ್ದಾರೆ ಎಂದ ಅವರು ಸಂತೋಷ್ ಅವರ ತಾಯಿಯ ಮೇಲೆಯೂ ಹಲ್ಲೆ ಮಾಡಿದ್ದು, ಪುತ್ತಿಲ ಪರಿವಾರದ ಸಂಸ್ಕೃತಿ ಎಂತದ್ದು ಎಂಬುದು ಗೊತ್ತಾಗಿದೆ ಎಂದರು. ಪುತ್ತಿಲ ಪರಿವಾರ ಗಲಭೆ ಎಬ್ಬಿಸಿ ಸಮಾಜದ ಶಾಂತಿ ಕದಡುವ ಕೆಲಸ ಮಾಡಬೇಡಿ, ಹಿಂದೂ ಸಮಾಜ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳೋಣ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply