
ಕತಾರ್ ಮಾರ್ಚ್ 19: ದಿನಾಂಕ 26-02-2025 ರಂದು ಐ.ಸಿ.ಸಿ. ಕತಾರ್, ಮುಂಬೈ ಹಾಲ್ ನಲ್ಲಿ ನಡೆದ ಬಿಲ್ಲವಾಸ್ ಕತಾರ್ ನ ಕಾರ್ಯಕಾರಿ ಮತ್ತು ಸಲಹಾ ಮಂಡಳಿಯ ಸಭೆಯಲ್ಲಿ, ಪ್ರಸ್ತುತ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಅಪರ್ಣ ಶರತ್ ಅವರನ್ನು ಸರ್ವಾನುಮತದಿಂದ ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಎಂದು ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಅಂಚನ್ ಘೋಷಿಸಿ ಶುಭಹಾರೈಸಿದರು.

ಶ್ರೀಮತಿ ಅಪರ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್, ಮಂಗಳೂರು ನಿವಾಸಿಯಾಗಿದ್ದು, ಎಂ.ಬಿ.ಎ. (ಮಾನವ ಸಂಪನ್ಮೂಲ) ಪದವಿಯನ್ನು ಹೊಂದಿದ್ದಾರೆ. ಅವರು ಕತಾರ್ ನ ಸುಪ್ರಸಿದ್ದ ಕಂಪೆನಿಗಳಲ್ಲಿ ಒಂದಾದ ಗಲ್ಫಾರ್ ಅಲ್ ಮಿಸ್ನಾಡ್ ನಲ್ಲಿ ಮಾನವ ಸಂಪನ್ಮೂಲ ವಿಭಾಗೀಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಲ್ಲವಾಸ್ ಕತಾರ್ ನ ಉಪಾಧ್ಯಕ್ಷರಾಗಿ ಶ್ರೀ ಜಯರಾಮ ಸುವರ್ಣ ಅವರನ್ನು ನೇಮಿಸಲಾಯಿತು.

ಬಿಲ್ಲವಾಸ್ ಕತಾರ್ – ಪ್ರಸ್ತುತ ಕಾರ್ಯಕಾರಿ ಸಮಿತಿ
ಪ್ರಸ್ತುತ ಕಾರ್ಯಕಾರಿ ಸಮಿತಿಯ ಸದಸ್ಯರು:
•ಶ್ರೀ ಮಹೇಶ್ ಕುಮಾರ್ – ಕಾರ್ಯದರ್ಶಿ
•ಶ್ರೀ ಸಂದೀಪ್ ಕೋಟ್ಯಾನ್ – ಜೊತೆ ಕಾರ್ಯದರ್ಶಿ
•ಶ್ರೀ ಅಜಯ್ ಕೋಟ್ಯಾನ್ – ಕೋಶಾಧಿಕಾರಿ
•ಶ್ರೀಮತಿ ಸೀಮಾ ಉಮೇಶ್ ಪೂಜಾರಿ – ಕ್ರೀಡಾ ಕಾರ್ಯದರ್ಶಿ
•ಶ್ರೀಮತಿ ಪೂಜಾ ಜಿತಿನ್ – ಸಾಂಸ್ಕೃತಿಕ ಕಾರ್ಯದರ್ಶಿ
•ಶ್ರೀಮತಿ ಶ್ವೇತಾ ಅನಿಲ್ – ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ
•ಶ್ರೀ ನಿತಿನ್ ಸನಿಲ್ – ಮಾಧ್ಯಮ ಸಂಯೋಜಕ
•ಶ್ರೀಮತಿ ಚಂಚಲಾಕ್ಷಿ – ಸದಸ್ಯ ಸಂಯೋಜಕಿ
•ಶ್ರೀ ನಿತಿನ್ ಕುಂಪಲ – ಲಾಜಿಸ್ಟಿಕ್ಸ್ ಸಂಯೋಜಕ
ಬಿಲ್ಲವಾಸ್ ಕತಾರ್ – ಒಂದು ಚರಿತ್ರೆಯ ಸಂಕ್ಷಿಪ್ತ ಪರಿಚಯ
● ಕತಾರ್ ಬಿಲ್ಲವ ಸಂಘಟನೆ ಹೇಗೆ ಆರಂಭವಾಯಿತು? ಪಯಣ ಹೇಗಿತ್ತು?
ಈ ಸಂಘಟನೆಯ ಬೀಜವನ್ನು ಶ್ರೀ ದಿವಾಕರ ಪೂಜಾರಿಯವರು ತಮ್ಮ ಗೆಳೆಯರೊಂದಿಗೆ ನೆಟ್ಟರು. 2012ರ ಮೇ 4ರಂದು, ಕೇವಲ 45 ಮಂದಿ ಸೇರಿ ಇಟ್ಟುಕೊಂಡ ಸಣ್ಣ ಸಭೆ, ಇಂದು ಒಂದು ದೊಡ್ಡ ಸಮುದಾಯವಾಗಿ ಬೆಳೆದಿದೆ.

ರಘುನಾಥ್ ಅಂಚನ್ ಅವರ ನೇತೃತ್ವದಲ್ಲಿ 2023ರವರೆಗೆ 250ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಐ.ಸಿ.ಸಿ (Indian Cultural Centre) ಯ ಅಂಗ ಸಂಸ್ಥೆಯಾಗಿ ಬೆಳೆಯಿತು. 2024ರಲ್ಲಿ ಸಂದೀಪ್ ಸಾಲಿಯಾನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸಂಘವು ಶೈಕ್ಷಣಿಕ ಮತ್ತು ವೈದ್ಯಕೀಯ ನೆರವು, ಹೊಸ ಪ್ರತಿಭೆಗಳ ಅನಾವರಣ, ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಶ್ರೇಯಸ್ಕರ ಸೇವೆ ಸಲ್ಲಿಸುತ್ತಿದೆ.
- ನೀವು ಅಧ್ಯಕ್ಷೆಯಾಗಿರುವ ಅವಧಿಯಲ್ಲಿ ಭವಿಷ್ಯದ ಯೋಜನೆಗಳು?
“ನಾವು ಸಂಘಟಕರನ್ನು ಇನ್ನೂ ಸಕ್ರಿಯರನ್ನಾಗಿಸಿ, ಕ್ರೀಯಾಶೀಲತೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಆರ್ಥಿಕ ನಿಧಿ ವೃದ್ಧಿ, ವಿವಿಧ ಸಂಘಟನೆಗಳೊಂದಿಗೆ ಸಹಕಾರ ಮತ್ತು ಹೊಂದಾಣಿಕೆಗೆ ಒತ್ತು ನೀಡಲು ನನ್ನ ತಂಡ ಶ್ರಮಿಸುತ್ತಿದೆ.
“ಬಿಲ್ಲವಾಸ್ ಕತಾರ್ ಅನ್ನು ಜಾಗತಿಕ ಮಾದರಿ ಸಂಘಟನೆಯಾಗಿ ಬೆಳೆಸುವ ಕನಸು ನನಸಾಗಿಸಲು ಶ್ರಮಿಸುತ್ತೇವೆ.”
- ಮಹಿಳಾ ಸಬಲೀಕರಣದ ಬಗ್ಗೆ ನಿಮ್ಮ ಚಿಂತನೆ?
“ಮಹಿಳೆಯರಲ್ಲಿ ಧೈರ್ಯ ತುಂಬಿ, ಅವರೊಳಗಿನ ಶಕ್ತಿಯನ್ನು ಎಚ್ಚರಿಸುವ ಉದ್ದೇಶ ನನ್ನದು. ಮಹಿಳಾ ಕರೆಗೆ ಸದಾ ಸ್ಪಂದಿಸಬೇಕು ಮತ್ತು ಸ್ವಾವಲಂಬನೆಗೆ ಒತ್ತು ನೀಡಬೇಕು.”
ವಿದೇಶದಲ್ಲಿ ತೊದಲಣೆಯ ಸಂಸ್ಕೃತಿಯನ್ನು ಉಳಿಸುವಲ್ಲಿ ನಿಮ್ಮ ಪಾತ್ರ?
“ನಮ್ಮ ಸಂಸ್ಕೃತಿಯ ಭವಿಷ್ಯ ಕುರಿತು ಚಿಂತಿಸುವ ಅಗತ್ಯ ಇಲ್ಲ. ನಾವು ನಮ್ಮ ಹಬ್ಬಗಳನ್ನು ಸಂಭ್ರಮಿಸುತ್ತೇವೆ, ತುಳು ಮತ್ತು ಕನ್ನಡ ಭಾಷೆಗೆ ಬದ್ಧರಾಗಿದ್ದೇವೆ. ಈ ನಂಟು ಮುಂದುವರೆಯುತ್ತದೆ.”
ಬಿಲ್ಲವ ಸಂಸ್ಕೃತಿ ಕುರಿತು ಎರಡು ಮಾತು…

“ಪರೋಪಕಾರ ಮತ್ತು ಶಾಂತಿ ಪ್ರಿಯತೆ – ಇದು ನಮ್ಮ ಧರ್ಮ. ಕೊಟ್ಟ ಮಾತು ತಪ್ಪುವುದು ನಮ್ಮ ಸಂಸ್ಕೃತಿಯಲ್ಲ!”
ಸಾರಾಂಶ:
ಬಿಲ್ಲವಾಸ್ ಕತಾರ್ ಸಂಘಟನೆಯ ಮೊದಲ ಮಹಿಳಾ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್, ಹೊಸ ದಿಕ್ಕುಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮಹಿಳಾ ಸಬಲೀಕರಣ, ತುಳು-ಕನ್ನಡ ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಂಘಟನೆಯ ಬೆಳವಣಿಗೆ – ಇವರ ಮುಖ್ಯ ಗುರಿಗಳಾಗಿವೆ. ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಮುನ್ನಡೆಸುವ ಈ ರೀತಿಯ ನಾಯಕತ್ವ ಮಹಿಳಾ ದಿನಾಚರಣೆಯ ಸತ್ಯಾರ್ಥವನ್ನು ಪ್ರತಿಬಿಂಬಿಸುತ್ತದೆ.





