LATEST NEWS
ದುಬಾರಿ ಬೆಲೆ ಬೈಕ್ ಕದ್ದು ಉಡುಪಿಯತ್ತ ಪರಾರಿಯಾದ ಕಳ್ಳರ ಗ್ಯಾಂಗ್ – ಸಿಸಿಟಿವಿಯಲ್ಲಿ ಸೆರೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು ಮೇ 27: ಮಂಗಳೂರು ಹಾಗೂ ಮುಲ್ಕಿಯಲ್ಲಿ ದುಬಾರಿ ಬೆಲೆ ಬಾಳುವ ಬೈಕ್ ಗಳನ್ನು ಕಳ್ಳತನ ಮಾಡಿದ ಗ್ಯಾಂಗ್ ಉಡುಪಿಯತ್ತ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಲ್ಕಿ ಬಪ್ಪನಾಡು ಪರಿಸರದ ನಿವಾಸಿ ನಿತೀಶ್ ಭಂಡಾರಿ ಅವರು ಬಪ್ಪನಾಡು ದೇವಸ್ಥಾನದ ಹತ್ತಿರ ನಿಲ್ಲಿಸಿದ್ದ ಬೈಕ್ ಕದ್ದಿರುವುದರ ತನಿಖೆ ನಡೆಸಿದ ಪೊಲೀಸರು ಹೆಜಮಾಡಿ ಟೋಲ್ ಗೇಟ್ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆ ಮೂಲಕ ಕಳ್ಳರು ಸಾಗಿದ್ದು ಗೊತ್ತಾಗಿದೆ. ಪಡುಬಿದ್ರಿ, ಎರ್ಮಾಳ್ ಮೂಲಕ ಕಳ್ಳರು ಸಾಗಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮಂಗಳೂರಿನಿಂದ ಬೈಕ್ ಕದ್ದವರು ಕೂಡ ಮೂಲ್ಕಿಯಲ್ಲಿ ಕದ್ದ ತಂಡದ ಜೊತೆಯಲ್ಲೇ ಸಾಗುತ್ತಿರುವುದು ಕಂಡು ಬಂದಿರುವುದರಿಂದ ಪ್ರಕರಣದಲ್ಲಿ ಭಾರಿ ಅನುಮಾನ ಉಂಟಾಗಿದೆ. ಕಳ್ಳರ ಕಾಪು ಮಜೂರು ಮತ್ತು ಉದ್ಯಾವರ ಕಡೆಗೆ ತೆರಳಿರುವುದರ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೂಲ್ಕಿಯಿಂದ ಕಳವಾದ ಬೈಕ್ನಲ್ಲಿ ಇಬ್ಬರು ಮತ್ತು ಮಂಗಳೂರಿನಿಂದ ಕದ್ದ ಬೈಕ್ನಲ್ಲಿ ಒಬ್ಬನೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ತಂಡ ಸರಣಿ ಕಳ್ಳತನ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಉಡುಪಿ ಜಿಲ್ಲೆಯತ್ತ ಸಾಗಿದ್ದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
You must be logged in to post a comment Login