BELTHANGADI
ಬೈಕ್ ಗೆ ಲಾರಿ ಡಿಕ್ಕಿ – ಬೈಕ ಸವಾರ ಸ್ಥಳದಲ್ಲೇ ಸಾವು…!!
ಬೆಳ್ತಂಗಡಿ: ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬೆಳ್ತಂಗಡಿಯ ಸಮೀಪದ ಅಳದಂಗಡಿ ಎಂಬಲ್ಲಿ ನಡೆದಿದೆ.
ಕುದ್ಯಾಡಿಯ ಬೈಕ್ ಸವಾರ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟ ಯುವಕ. ಇಲ್ಲಿನ ಪಿಲ್ಯ ಮಸೀದಿಯ ಬಳಿ ಬೈಕಿಗೆ ಈಚರ್ ವಾಹನ ಡಿಕ್ಕಿ ಹೊಡೆದಿದ್ದು ನಂತರ ಪರಾರಿಯಾಗಲು ಯತ್ನಿಸಿದ ಈಚರ್ ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login