Connect with us

    FILM

    ಬಿಗ್ ಬಾಸ್ – ಗೇಮ್ ನಡುವೆ ಗುದ್ದಾಡಿಕೊಂಡ ಸ್ಪರ್ಧಿಗಳು…!! ಧನರಾಜ್ ಆಚಾರ್ ಡೈಲಾಗ್ ಗೆ ಚಪ್ಪಾಳೆ

    ಬೆಂಗಳೂರು ಅಕ್ಟೋಬರ್ 04: ಬಿಗ್ ಬಾಸ್ ಸೀಸನ್ 11 ರಲ್ಲಿ ಗೇಮ್ ನೀಡಿದ ವೇಳೆ ಸ್ಪರ್ಧಿಗಳು ಗುದ್ದಾಡಿಕೊಂಡು ಅಸ್ವಸ್ಥರಾದ ಘಟನೆ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದೆ.


    ಸಾಧಿಸುವ ಛಲದಲ್ಲಿ ಉದ್ದೇಶವನ್ನು ಮರೆಯುವುದು ಮೃಗೀಯ ಪೃವತ್ತಿ. ಈ ಮೃಗೀಯ ಪ್ರವೃತ್ತಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮನುಷ್ಯರಾಗಬೇಕೆಂಬ ಸಂದೇಶದೊಂದಿಗೆ ಬಿಗ್‌ ಬಾಸ್‌ ಚೆಂಡನ್ನು ರಕ್ಷಿಸಿಕೊಳ್ಳುವ ಟಾಸ್ಕ್‌ ನೀಡಿದ್ದಾರೆ. ಈ ಆಟದ ವೇಳೆ ಸ್ಪರ್ಧಿಗಳು ಗುದ್ದಾಡಿಕೊಂಡಿದ್ದು ಶಿಶಿರ್‌ ಅಸ್ವಸ್ಥರಾಗಿದ್ದಾರೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಶಿಶಿರ್‌ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನು ತೋರಿಸಲಾಗಿದೆ.


    ಇನ್ನೊಂದೆಡೆ, ಧನರಾಜ್‌ ಅವರು ಮುಂಗಾರು ಮಳೆ ಗಣೇಶ್‌ ಅವರಂತೆ ನಟಿಸಿ, ಮನೆಯ ಸದಸ್ಯರ, ವೀಕ್ಷಕರ ಮನ ಗೆದ್ದಿದ್ದಾರೆ.
    ಬಿಗ್‌ಬಾಸ್ ಅನ್ನೇ ಎಕ್ಸ್‌ಪೋಸ್‌ ಮಾಡುತ್ತೇನೆ ಎಂದು ಗುಡುಗುತ್ತಿದ್ದ ಜಗದೀಶ್‌ ಮನೆ ಸದಸ್ಯರೊಂದಿಗೆ ತಮ್ಮ ಜೀವನ ಕಥೆಯನ್ನು ಹಂಚಿಕೊಂಡಿದ್ದಾರೆ. ಜಗದೀಶ್‌ ಮಾತಿಗೆ ಕಿವಿಯಾದ ಐಶ್ವರ್ಯಾ ಅವರು, ಮನಬಿಚ್ಚಿ ಮಾತನಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply