Connect with us

    KARNATAKA

    ಭಟ್ಕಳ : ಈಜಲು ಸಮುದ್ರಕ್ಕಿಳಿದ ಇಬ್ಬರಲ್ಲಿ ಬಾಲಕ ಮೃತ್ಯು, ಯುವಕ ನಾಪತ್ತೆ…!!

    ಭಟ್ಕಳ: ಈಜಲು ಸಮುದ್ರಕ್ಕಿಳಿದ  ಇಬ್ಬರು ಪ್ರವಾಸಿಗರಲ್ಲಿ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತ್ಪಟ್ಟಿದ್ದರೆ, ಮತ್ತೋರ್ವ ಯುವಕ ಸಮುದ್ರಪಾಲಾಗಿ ನಾಪತ್ತೆಯಾ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ರವಿವಾರ ಸಂಜೆ ನಡೆದಿದೆ.

     

    ಮೃತ ಬಾಲಕನನ್ನು ಇನಾಮುಲ್ಲ ಆಸ್ಕೆರಿ (14) ಮತ್ತು ನಾಪತ್ತೆಯಾಗಿರುವ ಯುವಕನನ್ನು ಹಾಫಿಝ್ ಕಾಶಿಪ್ ನದ್ವಿ (22) ಎಂದು ಗುರುತಿಸಲಾಗಿದೆ.ಸುಮಾರು ಎಂಟರಿಂದ ಹತ್ತು ಮಂದಿ ಇಲ್ಲಿನ ಸೋಡಿಗದ್ದೆ ಬಳಿಯ ಹಡಿನ ಮುಲ್ಲಿ ಹಿತ್ತಲು ಸಮುದ್ರಕ್ಕೆ ಪ್ರವಾಸಕ್ಕೆ ಬಂದಿದ್ದು, ಈ ಪೈಕಿ ಇನಾಮುಲ್ಲ ಆಸ್ಕೆರಿ ಮತ್ತು ಹಾಫಿಝ್ ಕಾಶಿಪ್ ನದ್ವಿ ಈಜಲು ಇಳಿದಿದ್ದರು . ಬಾಲಕ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಅರಿತ ಸ್ಥಳೀಯ ಮೀನುಗಾರರು ತಕ್ಷಣ ಆತನಿಗೆ ಸಹಾಯ ಮಾಡಲು ಮುಂದೆ ಬಂದರು. ಬಾಲಕನನ್ನು ದಡಕ್ಕೆ ತಂದು ರಕ್ಷಿಸಲು ಪ್ರಯತ್ನಿಸಲಾಯಿತು, ಆದರೆ ಆಸ್ಪತ್ರೆಗೆ ತಲುಪುವ ಮೊದಲು ಬಾಲಕ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ನಾಪತ್ತೆಯಾದ ಯುವಕನಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply