Connect with us

    KARNATAKA

    ಬೆಂಗಳೂರು: ತಿರಂಗಾ ಹಾರಿಸಲು ಹೋಗಿ ಜಾರಿ ಬಿದ್ದು ಟೆಕ್ಕಿ ಸಾವು

    ಬೆಂಗಳೂರು, ಆಗಸ್ಟ್ 15: ಹರ್‌ ಘರ್‌ ತಿರಂಗಾ ಅಭಿಯಾನಕ್ಕಾಗಿ ಮನೆಯಲ್ಲಿ ತಿರಂಗಾ ಹಾರಿಸಲು ಹೋಗಿ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

    ಇವರು ತಾವು ವಾಸಿಸುವ ಕಟ್ಟಡದ ಎರಡನೇ ಮಹಡಿಯ ಟೇರಸ್‌ನಲ್ಲಿ ರಾಷ್ಟ್ರಧ್ವಜ ಕಟ್ಟುತ್ತಿದ್ದರು. ಈ ಸಮಯದಲ್ಲಿ ಅವರು ಅಲ್ಲಿಂದ ಜಾರಿಬಿದ್ದು ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆಣ್ಣೂರಿನಲ್ಲಿ ಈ ದುರ್ಘಟನೆ ನಡೆದಿದೆ.
    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆರ್ಚಕ ನಾರಾಯಣ ಭಟ್‌ ಅವರ ಪುತ್ರ ವಿಶ್ವಾಸ್‌ ಕುಮಾರ್‌ ಮೃತಪಟ್ಟ ದುರ್ದೈವಿ.

    ಖಾಸಗಿ ಕಂಪನಿಯ ಉದ್ಯೋಗಿಯಾದ ಇವರು ಹೆಣ್ಣೂರು ಎಚ್‌ಬಿಆರ್‌ ಬಡಾವಣೆಯ ಐದನೇ ಬ್ಲಾಕ್‌ನಲ್ಲಿ ತಾವು ವಾಸಿಸುತ್ತಿದ್ದ ಕಟ್ಟಡದ ಟೇರಸ್‌ಗೆ ರಾಷ್ಟ್ರಧ್ವಜ ಹಾರಿಸಲೆಂದು ಹೋಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply