Connect with us

    KARNATAKA

    ಆಂಟಿ ಅತಿಯಾದ ಸೆ*ಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಮರ್ಡರ್ ಮಾಡಿದೆ ಎಂದ ಟೆಕ್ಕಿ

    ಬೆಂಗಳೂರು ಎಪ್ರಿಲ್ 24: ಡ್ರೈವಿಂಗ್ ಸ್ಕೂಲ್ ಮುಖ್ಯಸ್ಥೆ ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಮಾಡಿದ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿಳುತ್ತಿದ್ದಂತೆ ಕೊಲೆಗೆ ಕಾರಣ ಏನು ಎಂಬ ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ.


    ಎಪ್ರಿಲ್ 19 ರಂದು ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನವಾಗಿ ಕೊಲೆಯಾದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿ ಹೇರೋಹಳ್ಳಿ ನಿವಾಸಿ ನವೀನ್ ಸಿಕ್ಕಿಬಿದ್ದಿದ್ದ, ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆಗೆ ಕಾರಣ ಎನು ಎನ್ನುವುದನ್ನು ಆತ ಬಾಯಿ ಬಿಟ್ಟಿದ್ದಾನೆ. ಶೋಭಾ ಎಂಬ ಮಹಿಳೆ ಸುಪ್ರಿಯಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ರು. ಹೀಗಾಗಿ, ಮನೆಯಲ್ಲಿ ಒಬ್ಬರೇ ವಾಸವಾಗಿದ್ರು. ತಾಯಿ ಶೋಭಾಗೆ ಹರ್ಷಿತಾ ಕರೆ ಮಾಡಿದ್ರು. ಈ ವೇಳೆ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಅಕ್ಕ ಸುಪ್ರಿಯಾ​ಗೆ ಕರೆ ಮಾಡಿ ಫೋನ್ ಸ್ವಿಚ್ಡ್ ಆಫ್ ಆಗಿರೋ ವಿಚಾರ ಹೇಳಿದ್ದರು. ರಾತ್ರಿ ದೊಡ್ಡ ಮಗಳು ಸುಪ್ರಿಯಾ ಮನೆ ಬಳಿ ಬಂದು ಚೆಕ್ ಮಾಡ್ದಾಗ ಕೊಲೆಯಾಗಿರೋ ವಿಚಾರ ಬೆಳಕಿಗೆ ಬಂದಿದೆ. ಶೋಭಾ ಮೃತದೇಹ ನಗ್ನವಾಗಿ ಪತ್ತೆಯಾಗಿದೆ.


    ಆರೋಪಿ ನವೀನ್ ಹಾಗೂ ಶೋಭಾ ಇನ್ಸ್​ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ರು, ಶೋಭಾ ಹಾಗೂ ನವೀನ್ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುತ್ತಿದ್ದು, ಅನೊನ್ಯತೆ ಹೊಂದಿದ್ದರು. ಅಲ್ಲದೆ ನವೀನ್ ಶೋಭಾ ಅವರ ಮನೆಗೆ ಬಂದು ಹೋಗುತ್ತಿದ್ದು, ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇತ್ತು. ಏ.18ರಂದು ಪ್ರಿಯಕರ ನವೀನ್‌ಗೆ ಕರೆ ಮಾಡಿದ ಶೋಭಾ, ರಾತ್ರಿ ಮನೆಗೆ ಬರುವಂತೆ ಆಹ್ವಾನಿ ಸಿದ್ದಾರೆ. ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಹೆಬ್ಬಾಳ ಬಳಿ ಬಂದ ನವೀನ್‌ನನ್ನು ಈಕೆಯೇ ತನ್ನ ಕಾರಿನಲ್ಲಿ ಮನೆಗೆ ಕರೆ ತಂದಿದ್ದಾರೆ. ಬಳಿಕ ಇಬ್ಬರು ಊಟ ಮುಗಿ ಸಿದ್ದು, ಈಕೆ ಮದ್ಯ ಸೇವಿಸಿದ್ದಾಳೆ. ಬಳಿಕ ಶೋಭಾ, ನವೀನ್‌ಗೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಪ್ರಚೋದಿಸಿದ್ದಾರೆ. ಆದರೆ, ಆತ ನಿರಾಕರಿಸಿದ್ದಾನೆ. ಕೆಲ ಹೊತ್ತಿನ ಬಳಿಕ ನವೀನ್‌ನನ್ನು ಮತ್ತೂಮ್ಮೆ ಪ್ರಚೋದಿಸಿದ ಶೋಭಾ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

    ಬಳಿಕ ಮತ್ತೂಮ್ಮೆ ನವೀನ್‌ ಬಳಿ ಬಂದು ಅಶ್ಲೀಲ ವಿಡಿಯೋ ತೋರಿಸಿ, ಈ ಮಾದರಿಯಲ್ಲಿ ಲೈಂಗಿಕ ಕ್ರಿಯೆ ನಡೆಸೋಣ ಎಂದು ಪೀಡಿಸಿದ್ದಾರೆ. ಅದಕ್ಕೆ ನಿರಾಕರಿಸಿದ ನವೀನ್‌, ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದಿ ದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಯಾಗಿದ್ದು, ಅದು ವಿಕೋಪಕ್ಕೆ ಹೋಗಿದೆ. ಅಲ್ಲದೆ, ಗಲಾಟೆ ವೇಳೆ ಗಾಯಗೊಂಡಿದ್ದ ಆತನ ಕೈಗೆ ಮತ್ತಷ್ಟು ಗಾಯಗೊಳಿಸಿದ್ದಾರೆ. ಅದರಿಂದ ಇನ್ನಷ್ಟು ಕೋಪಗೊಂಡ ಆರೋಪಿ, ಶೋಭಾರ ಕತ್ತು ಹಿಸುಕಿ ಕೊಲೆಗೈದು, ಬಳಿಕ ಮನೆ ಮುಂದೆ ನಿಂತಿದ್ದ ಶೋಭಾರ ಕಾರಿನಲ್ಲೇ ಪರಾರಿ ಯಾಗಿದ್ದ. ಮರು ದಿನ ಶೋಭಾರ 2ನೇ ಪುತ್ರಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
    ನವೀನ್ ಕೊಲೆ ಮಾಡಿದ್ದು ಮಾತ್ರವಲ್ಲ ಆಕೆ ಧರಿಸಿದ್ದ ಚೈನ್, ಮೊಬೈಲ್, ಎಟಿಎಂ ಕಾರ್ಡ್​ ಹಾಗೂ ಕಾರುನ್ನೂ ಕದ್ದು ಕಾಲ್ಕಿತ್ತಿದ್ದ. ಇದೀಗ ಬನಶಂಕರಿ ಮೂಲದ ಆರೋಪಿ ನವೀನ್​ನನ್ನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply