BANTWAL
ಜೇನು ನೋಣ ದಾಳಿ – 9 ಮಂದಿಗೆ ಗಂಭೀರ ಗಾಯ

ಬಂಟ್ವಾಳ ಫೆಬ್ರವರಿ 27: : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನು ನೋಣ ಕಚ್ಚಿದ ಪರಿಣಾಮ ಒಂಬತ್ತು ಮಂದಿಗೆ ಗಂಭೀರ ಗಾಯಗಳಾದ ಘಟನೆ ಕಲಾಬಾಗಿಲು ಎಂಬಲ್ಲಿ ನಡೆದಿದೆ. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇರ್ವತ್ತೂರು ಗ್ರಾಮದ ಕಲಾಬಾಗಿಲು ಎಂಬಲ್ಲಿ ಅಲ್ಲಿನ ಸ್ಥಳೀಯ ನಿವಾಸಿಗಳು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೀಟಿಂಗ್ ಗೆ ರಸ್ತೆಯಲ್ಲಿ ಜೊತೆಯಾಗಿ ತೆರಳುವ ವೇಳೆ ಜೇನು ನೊಣ ಕಚ್ಚಿದ್ದು, ನೊಣಗಳ ಗೂಡಿಗೆ ಗಿಡುಗ ಕಚ್ಚಿದ ಪರಿಣಾಮ ಕೋಪಗೊಂಡ ಜೇನು ನೊಣಗಳು ದಾರಿಯಲ್ಲಿ ಹೋಗುವ ಅಮಾಯಕರ ಮೇಲೆ ದಾಳಿ ಮಾಡಿದೆ.
ಗಾಯಗೊಂಡ ಐವರನ್ನು ಕೂಡ ಪುಂಜಾಲಕಟ್ಟೆ ಆಸ್ಪತ್ರೆಯ 108 ಅಂಬ್ಯುಲೆನ್ಸ್ ಚಾಲಕ ಜಗನ್ನಾಥ್ ಶೆಟ್ಟಿ ಅವರು ಸಕಾಲದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಐವರಿಗೂ ಚಿಕಿತ್ಸೆ ನೀಡಲಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಅವರು ತಿಳಿಸಿದ್ದಾರೆ.
You must be logged in to post a comment Login