Connect with us

    BANTWAL

    ಬಂಟ್ವಾಳ : ಮುಸ್ಲಿಂ ಧರ್ಮ ನಿಂದನೆ ಆರೋಪ, ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲು ವಿರುದ್ದ FIR..!

    ಬಂಟ್ವಾಳ :  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ಬಿ.ಸಿ ರೋಡ್ ನಲ್ಲಿ ಸೋಮವಾರ ನಡೆದ  ಹಿಂದೂ ಸಂಘಟನೆಗಳ ಶಕ್ತಿ ಪ್ರದರ್ಶನ ವಿಚಾರದಲ್ಲಿ ವಿಹೆಚ್‌ಪಿ  ಮುಖಂಡ ಶರಣ್ ಪಂಪ್‌ವೆಲ್ ಮತ್ತು ಬಂಟ್ವಾಳ ಭಜರಂಗದಳ ಮುಖಂಡ ಭರತ್ ಕುಮ್ಡೆಲು ಅವರುಗಳ ವಿರುದ್ದ  ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

     

    ಬಂಟ್ವಾಳ ನಗರ ಠಾಣೆಗೆ ದೂರು ಮಹಮ್ಮದ್ ರಫೀಕ್  ಎಂಬವರು ಈ ಇಬ್ಬರು ಮುಖಂಡರುಗಳ  ವಿರುದ್ದ ದೂರು ಸಲ್ಲಿಸಿದ್ದರು. ಶರಣ್ ಪಂಪ್ ವೆಲ್‌ಗೆ  ಸವಾಲು ಹಾಕಿದ್ದ ಶರೀಫ್ ವಿರುದ್ಧ  ಇವರು ಅವ್ಯಾಚ್ಯ ಶಬ್ಧ ಪ್ರಯೋಗ  ಮಾಡಿದ ಆರೋಪದ ಹಿನ್ನಲೆ ಮತ್ತು   ಮುಸ್ಲಿಂ ಧರ್ಮದ ಬಗ್ಗೆ ನಿಂದನೆ ಮಾಡಿದ ಆರೋಪ ಮೇಲೆ ದೂರು ದಾಖಲಾಗಿದೆ. ಈ  ಹಿನ್ನಲೆ ಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಠಾಣಾ ಪೊಲೀಸರು FIR ದಾಖಲು ಮಾಡಿದ್ದಾರೆ.

     48 ಗಂಟೆ ಬಂಟ್ವಾಳದಲ್ಲಿ ಮದ್ಯ ಮಾರಾಟ ನಿಷೇಧ:

    ಬಿ.ಸಿ.ರೋಡ್ ನಲ್ಲಿ ಸೋಮವಾರ ಬೆಳಗ್ಗೆ ನಡೆದ ಘಟನೆಗಳು ಹಾಗೂ ಅದಕ್ಕೆ ಸಂಬಂಧಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಅವಧಿವರೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡುವ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.ಸೆ.16ರಂದು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದು, ಎಲ್ಲ ವಿಧದ ಅಮಲು ಪದಾರ್ಥಗಳ ಮಾರಾಟವನ್ನು ಮದ್ಯದಂಗಡಿಗಳಲ್ಲಿ ಮಾರಾಟವನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವನ್ನು ಮನಗಂಡು ಆದೇಶ ಹೊರಡಿಸಲಾಗಿದೆ ಎಂದವರು ತಿಳಿಸಿದ್ದಾರೆ. ಬಂಟ್ವಾಳ ತಹಸೀಲ್ದಾರ್ ಕೋರಿಕೆ ಮೇರೆಗೆ ಆದೇಶ ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply