Connect with us

    BANTWAL

    ಬಂಟ್ವಾಳ : ರಸ್ತೆಯಲ್ಲಿ ಸಿಕ್ಕಿದ ದುಬಾರಿ ಚಿನ್ನದ ಮುತ್ತಿನ ಹಾರವನ್ನು ವಾರೀಸುದಾರರಿಗೆ ಹಸ್ತಾಂತರಿಸಿದ ಚರ್ಮುರಿ ವ್ಯಾಪಾರಿ..!

    ಬಂಟ್ವಾಳ : ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಮುತ್ತಿನ ಹಾರವನ್ನು ಕಳೆದುಕೊಂಡ ಕುಟುಂಬಕ್ಕೆ ಹಸ್ತಾಂತರಿಸಿ, ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಇದರ ಹಿರಿಯ ಸದಸ್ಯರಾದ ಉಮೇಶ್ ಆಚಾರ್ಯ ಬಂಟ್ವಾಳ ಇವರು ಮಾನವೀಯತೆ ಮೆರೆದಿದ್ದಾರೆ.

    ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಇದರ ಹಿರಿಯ ಸದಸ್ಯರಾದ ಉಮೇಶ್ ಆಚಾರ್ಯ ಬಂಟ್ವಾಳ ಇವರು ಪಾಣೆ ಮಂಗಳೂರು ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಚರ್ಮುರಿ ಮಾಡುವಾಗ ರಸ್ತೆಯಲ್ಲಿ ಬಿದ್ದು ಎರಡುವರೆ ಪವನಿನ ಚಿನ್ನದ ಮುತ್ತಿನ ಹಾರ ಸಿಕ್ಕಿದೆ.

    ಅದನ್ನು ಬುಧವಾರ ಮಧ್ಯಾಹ್ನ ಆಡಳಿತ ಕಮಿಟಿಯ ಮತ್ತು ಸಂಘದ ಸದಸ್ಯರಾದ ಸತೀಶ್ ಪಾಣೆ ಮಂಗಳೂರು ಪ್ರಸಾದ್ ಬಂಟ್ವಾಳ ಸತೀಶ್ ಬಿಸಿ ರೋಡ್ ಮತ್ತು ಸಂಘದ ಜಿಲ್ಲಾಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ ಇವರ ಉಪಸ್ಥಿತಿಯಲ್ಲಿ ಚಿನ್ನ ಕಳೆದುಕೊಂಡ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು.

     

    Share Information
    Advertisement
    Click to comment

    You must be logged in to post a comment Login

    Leave a Reply