Connect with us

    DAKSHINA KANNADA

    ಅಗಲಿದ ಭಜರಂಗದಳ ಕಾರ್ಯಕರ್ತನ ಮನೆಗೆ ಧನಸಹಾಯ ನೀಡಿ ಪ್ರಾಮಾಣಿಕತೆ ಮೆರೆದ ಬಂಟ್ವಾಳ ಭಜರಂಗದಳ

    ಪುತ್ತೂರು, ಮೇ 27: ಕರೋನ ಸಂದರ್ಭದಲ್ಲಿ ನಿರಂತರ ಆಂಬುಲೆನ್ಸ್ ಡ್ರೈವರ್ ಆಗಿ ಸೇವೆ ಸಲ್ಲಿಸಿದ ಜೈ ಹನುಮಾನ್ ಶಾಖೆ ಅಜಿಲ ಮೊಗೇರ್ ಘಟಕದ ಕಾರ್ಯಕರ್ತ ನಿತಿನ್ ಪೂಜಾರಿ (ರೂಪೇಶ್ ಪೂಜಾರಿ )ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾಗಿದ್ದರು.

    ಬಡತನದಲ್ಲಿ ಜೀವನ ಸಾಗಿಸುತಿದ್ದ ಇವನ ಕುಟುಂಬ ಆ ತಾಯಿಯ ಕಷ್ಟವನ್ನು ಕಂಡು ವಿಶ್ವಹಿಂದುಪರಿಷದ್ ಭಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗೇರ್ ಹಾಗೂ ಸರಪಾಡಿ ಖಂಡ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಸೇರಿ ಭಜರಂಗದಳ ಬಂಟ್ವಾಳ ಪ್ರಖಂಡದ ಸಹಯೋಗದೊಂದಿಗೆ ಸುಮಾರು 2,30,000 ಎರಡು ಲಕ್ಷ ಮೂವತ್ತು ಸಾವಿರ ಧನ ಸಹಾಯ ಸಂಗ್ರಹಿಸಿ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್, ಗುರುರಾಜ್ ಬಂಟ್ವಾಳ ಸಮ್ಮುಖದಲ್ಲಿ ನಿತಿನ್ ಪೂಜಾರಿ ಕುಟುಂಬಕ್ಕೆ ಚೆಕ್ ಹಸ್ತಾಂತರ ಮಾಡಲಾಯಿತು.

    ಪ್ರಸಾದ್ ಕುಮಾರ್ ರೈ ನುಡಿನಮನ ಸಲ್ಲಿಸಿದರು ಸಂಘದ ಜಿಲ್ಲಾ ಕಾರ್ಯವಾಹಕ್ ವಿನೋದ್ ಕೊಡ್ಮಾನ್ ಸಂತೋಷ್ ಸರಪಾಡಿ ಪುರುಷೋತ್ತಮ್ ಪೂಜಾರಿ ಹಾಗೂ ಭಜರಂಗದಳ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply