Connect with us

    BANTWAL

    ಏಕಾಏಕಿ ಕಾಡಿದ ಅನಾರೋಗ್ಯ, ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ ಬಂಟ್ವಾಳದ ಆಯಿಷಾ ಶೈಮಾ ..!

    ಬಂಟ್ವಾಳ : ಏಕಾಏಕಿ ಅನಾರೋಗ್ಯ ಕಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ವಿದ್ಯಾರ್ಥಿನಿ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ  ಇಹಲೋಕ ತ್ಯಜಿಸಿದ್ದಾಳೆ.

    ಬಿ ಸಿ ರೋಡು ಸಮೀಪದ ತಲಪಾಡಿ ನಿವಾಸಿ ಸಫೀರ್ ಅಹ್ಮದ್ ಅವರ ಪುತ್ರಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಆಯಿಷಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಳು. ಗಂಭೀರಾವಸ್ಥೆಯಲ್ಲಿದ್ದ ಆಯಿಷಾ ಶೈಮಾ ಳನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೆರಡು ದಿನಗಳ ಕಾಲ ಕೋಮಾವಸ್ಥೆಯಲ್ಲೇ ಇದ್ದ ಈಕೆ ಬಳಿಕ ಒಂದಷ್ಟು ಚಿಕಿತ್ಸೆಗೆ ಸ್ಪಂದಿಸಿ ಚೇತರಿಕೆ ಹಂತದಲ್ಲಿದ್ದಳು ಎನ್ನಲಾಗಿದೆ. ಆದರೆ ಬುಧವಾರ ಮತ್ತೆ ಆರೋಗ್ಯದಲ್ಲಿ ಗಂಭೀರ ಏರು-ಪೇರು ಉಂಟಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply